Advertisement

“ಪ‌.ಜಾತಿ, ಪಂಗಡದವರಿಗೆ ಭೂಮಿ ನೀಡಲು ಕ್ರಮ’: ಸಚಿವ ಕೋಟ ಶ್ರೀನಿವಾಸ ಪೂಜಾರಿ

12:32 AM Jan 15, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿರುವ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಕುಟುಂಬಗಳಿಗೆ ಭೂಮಿ ನೀಡುವ ಕುರಿತು ಲಭ್ಯವಿರುವ ಭೂಮಿಯ ಪ್ರಮಾಣದ ಬಗ್ಗೆ 15 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಡಿಸಿ ಮನ್ನಾ ಜಾಗದ ಸಮಸ್ಯೆ ಕುರಿತು ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.

ಪ.ಜಾತಿ/ಪಂಗಡದ ಕುಟುಂಬ ತಮಗೆ ಸ್ವಂತ ಜಾಗ ಇಲ್ಲ ಎನ್ನು ವಂತಾಗ ಬಾರದು. ಆದ್ದರಿಂದ ಜಿಲ್ಲೆ ಯಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ, ಕಂದಾಯ ಭೂಮಿಯ ವಿವರಗಳನ್ನು ಸಂಗ್ರಹಿಸಿ ಅದರಲ್ಲಿ ಅವರಿಗೆ ನೀಡಬಹುದಾದ ಭೂಮಿ ಯ ಪ್ರಮಾಣ ಮತ್ತು ಖಾಸಗಿಯವರಿಂದ ಖರೀದಿಸಿ ನೀಡಬಹು ದಾದ ಭೂಮಿ, ಭೂ ಒಡೆತನ ಯೋಜನೆಯ ಮೂಲಕ ನೀಡ ಬಹುದಾದ ಭೂಮಿಯ ಬಗ್ಗೆ ತಾಲೂಕು ವಾರು ಸಮಗ್ರ ವಿವರ ನೀಡ ಬೇಕು ಎಂದು ನಿರ್ದೇಶಿಸಿದರು.

ಇದನ್ನೂ ಓದಿ:ಬಿಪಿನ್ ರಾವತ್ ಹೆಲಿಕಾಪ್ಟರ್‌ ದುರಂತಕ್ಕೆ ಪ್ರತಿಕೂಲ ಹವಾಮಾನವೇ ಕಾರಣ!

ಹಣದ ಕೊರತೆ ಇಲ್ಲ
ಪ. ಜಾತಿ/ಪಂಗಡದವರಿಗೆ ಖಾಸಗಿ ಯವರಿಂದ ಭೂಮಿ ಖರೀದಿಸಿ ನೀಡಲು ಹಣದ ಕೊರತೆ ಇಲ್ಲ. ಇದಕ್ಕಾಗಿ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಬಿಡು ಗಡೆ ಮಾಡ ಲಾಗುವುದು. ಆದ್ದರಿಂದ ಶೀಘ್ರದಲ್ಲಿ ಭೂಮಿ ಯನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಡಿಸಿ ಕೂರ್ಮಾ ರಾವ್‌ ಎಂ., ಅಧಿಕಾರಿಗಳಾದ ಆಶೀಶ್‌ ರೆಡ್ಡಿ, ಸದಾಶಿವ ಪ್ರಭು, ರಾಜು, ಅನಿತಾ ಮಡೂÉರು, ತಹಶೀಲ್ದಾರ್‌ ಮೊದಲಾ ದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next