Advertisement
ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಂಬಾಕು ಬೆಳೆಗಾರರ ಸಭೆ ನಡೆಸಿ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ, ನಂತರ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ಇತ್ತು, ಹರಾಜು ಪ್ರಕ್ರಿಯೆ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗುಣಮಟ್ಟದ ತಂಬಾಕು ಉತ್ಪಾದನೆಗೆ ಭೂಮಿಯ ಫಲವತ್ತತೆ ಹೆಚ್ಚಿಸಲು ಸೆಣಬಿನ ಬೀಜವನ್ನು ಜಮೀನುಗಳಿಗೆ ಬಿತ್ತನೆ ಮಾಡಿ 65 ದಿನಗಳ ನಂತರ ಉಳುಮೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ಅಂತರ್ಜಲ ವೃದ್ದಿಸಲಿದೆ, ಬರಗಾಲದಲ್ಲಿಯೂ ಬೆಳೆಯನ್ನು ಸಂರಕ್ಷಿಸುತ್ತದೆ ಆದ್ದರಿಂದ ಸೆಣಬಿನ ಬೀಜವನ್ನು ಮಂಡಳಿಯಿಂದ ಶೇ.50 ರಷ್ಟು ಸಬ್ಸಿಡಿ ರೂಪದಲ್ಲಿ ನೀಡಲಾಗುವುದು.
Related Articles
Advertisement
ಕೋವಿಡ್ ಸಮಯದಲ್ಲಿಯೂ ನಮ್ಮ ದೇಶದಲ್ಲಿ ಕೃಷಿಗೆ ತೊಂದರೆಯಾಗಿಲ್ಲಾ. ಹೆಚ್ಚು ತಂಬಾಕು ಬೆಳೆದರೆ ಕೊಂಡುಕೊಳ್ಳುವವರಿಲ್ಲಾ ಎಂದು ರೈತರು ಆತಂಕ ಪಡಬೇಡಿ. ಖರೀದಿಸುವ ಕಂಪನಿಗಳು ಕೊಳ್ಳುವ ಭರವಸೆ ನೀಡಿವೆ. ರಾಜ್ಯದಲ್ಲಿ ಇದುವರೆಗೆ ೨೬ ಮಿಲಿಯನ್ ತಂಬಾಕು ಮಾರಾಟವಾಗಿದ್ದು ಸರಾಸರಿ 152 ರೂ ಬೆಲೆ ದೊರೆತಿದೆ ಕಳೆದ ವರ್ಷ ಇದೇ ಸಮಯಕ್ಕೆ 26 ಮಿಲಿಯನ್ ಮಾರಾಟವಾಗಿತ್ತು 134 ರೂ. ಸರಾಸರಿ ಬೆಲೆ ದೊರೆತ್ತಿತ್ತು ಎಂದರು.
ಈ ವೇಳೆ ಮಂಡಳಿಯ ಆರ್.ಎಂ.ಓ ಮಾರಣ್ಣ, ಹರಾಜು ಅಧೀಕ್ಷಕರಾದ ಸಿದ್ದರಾಮ್ ಡಾಂಗೆ, ಧನ್ರಾಜ್, ಸವಿತಾ ಹಾಗೂ ಪೀಲ್ಡ್ ಆಫೀಸರ್ ಸಂದೀಪ್ ಸೇರಿದಂತೆ ಸಿಬ್ಬಂದಿಗಳಿದ್ದರು.