Advertisement

ಸರ್ಕಾರದ ಸೌಲಭ್ಯ ತಲುಪದಿದ್ದರೆ ಕ್ರಮ

04:52 PM Dec 20, 2017 | Team Udayavani |

ತಿಪಟೂರು: ಸರ್ಕಾರ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಪ್ರಯೋಜನಗಳನ್ನು ಅರ್ಹ ಫ‌ಲಾನುಭವಿಗಳಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ತಲುಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

Advertisement

ನಗರದ ಕಲ್ಪತರು ಆಡಿಟೋರಿಯಂನಲ್ಲಿ ನಡೆದ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರಿಗೆ ನಾಗರಿಕ ಹಕ್ಕು ಅಧಿನಿಯಮ 55 ಹಾಗೂ ಪರಿಶಿಷ್ಟ ಜಾತಿ ವರ್ಗಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 ಮತ್ತು ಎಸ್‌.ಸಿ.ಪಿ. ಮತ್ತು ಟಿ.ಎಸ್‌.ಪಿ ಅನುಷ್ಠಾನ ಕಾಯ್ದೆ 2013ರ ಬಗ್ಗೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದವರು ಅಭಿವೃದ್ಧಿಯಾಗಬೇಕು: ಹಿಂದುಳಿದ ವರ್ಗಗಳು ಸಮಾಜಮುಖೀಯಾಗಿ ಅಭಿವೃದ್ಧಿಯಾಗಬೇಕು. ಸರ್ಕಾರದ ಅನುದಾನಗಳು ಸಕಾಲಕ್ಕೆ ಅರ್ಹರಿಗೆ ಸದುಪಯೋಗವಾಗಬೇಕು. ಹಿಂದುಳಿದ ವರ್ಗದ ಪೋಷಕರು ಮುಖ್ಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲು ಅವಕಾಶ ಮಾಡಿಕೊಡಬೇಕು. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂಬ ಎಚ್ಚರಿಕೆ ನೀಡಿದರು.

ಅನುದಾನ ವಿಳಂಬವಾಗದಿರಲಿ: ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಡಾ.ವಿ.ಮಂಜುನಾಥ್‌ ಮಾತನಾಡಿ, ಸರ್ಕಾರ ಜನರಿಗೆ ಕೊಟ್ಟಿರುವ ಯೋಜನೆಗೆ ಪೂರಕವಾಗಿ ನಿಯಮಗಳಿರುತ್ತವೆ. ಅನುದಾನಗಳು ಕೊಡುವಾಗ ವಿಳಂಬ ಮಾಡಬಾರದು. ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಅವರ ಕುಂದುಕೊರತೆಗಳನ್ನು ಸ್ವೀಕರಿಸಿ, ಶೋಷಿತ ವರ್ಗಕ್ಕೆ ಬೇಕಾಗುವ ಅನುದಾನಗಳನ್ನು ಕಿಂಚಿತ್ತೂ ಲೋಪವಾಗದೆ ನೀಡುವುದು ಕರ್ತವ್ಯ. ಅನಕ್ಷರತೆ ಎಂಬ ಮೂಗುದಾರವನ್ನು ಕಳಚಿ ಸಮಾಜಮುಖೀಯಾಗಿ ಬೆಳೆಸಿ, ದಲಿತ ಪರ ಯೋಜನೆಗಳನ್ನು ಪಡೆದು ಶಿಕ್ಷಣಕ್ಕೆ ಒತ್ತು ನೀಡಿ ಸಾಮರಸ್ಯ ಜೀವನವನ್ನು ಹುಟ್ಟು ಹಾಕುವ ಮೂಲಕ ಹಿಂದುಳಿದ ವರ್ಗಗಳನ್ನು ಸಬಲೀಕರಣವಾಗಿಸಬೇಕು ಎಂದರು.

ಕಾಳಜಿ ವಹಿಸಿ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್‌ಮೂರ್ತಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಷಡಕ್ಷರಿ ಮಾತನಾಡಿ, ಸಂಬಂದಿಸಿದ ಎಲ್ಲಾ ಅಧಿಕಾರಿಗಳು ವಿಶೇಷ ಜವಾಬ್ದಾರಿ ವಹಿಸಿ ಸರ್ಕಾರದ ಸೌಲತತುಗಳನ್ನು ಸಂಬಂದಿಸಿದ ವರ್ಗದ ಫ‌ಲಾನುಭವಿಗಳಿಗೆ ಯಾವುದೇ ಲೋಪವಾಗದಂತೆ ತಲುಪಿಸಬೇಕು. ಸರ್ಕಾರ ಯೋಜನೆಗಳನ್ನು ಇವರಿಗೆ ತಿಳಿಯುವಂತೆ ಪ್ರಚುರ ಪಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಎನ್‌.ಎಂ.ಸುರೇಶ್‌, ಉಪಾಧ್ಯಕ್ಷ ಶಂಕರ್‌, ವಕೀಲರಾದ ವೆಂಕಟೇಶ್‌, ಶೋಭಾ ಜಯದೇವ್‌ ಸೇರಿದಂತೆ ದಲಿತ ಮುಖಂಡರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next