Advertisement

ರಸಗೊಬ್ಬರಕ್ಕೆ ಹೆಚ್ಚಿನ ದರ ವಿಧಿಸಿದರೆ ಕ್ರಮ

02:11 PM Jul 24, 2022 | Team Udayavani |

ಜೇವರ್ಗಿ: ಹೆಚ್ಚಿನ ದರ ಪಡೆದು ಅಧಿಕೃತ ಬಿಲ್‌ ನೀಡದೇ ರಸಗೊಬ್ಬರ ಮಾರಿದರೆ ಅಂತವರ ರಸಗೊಬ್ಬರ ಮಾರಾಟ ಪರವಾನಗಿ ರದ್ಧುಪಡಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ರಂಗಣಗೌಡ ಎಚ್ಚರಿಸಿದರು.

Advertisement

ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ರಸಗೊಬ್ಬರ ಮಾರಾಟ ಗಾರರ ಸಭೆ ನಡೆಸಿ ಮಾತನಾಡಿದ ಅವರು, ಕೆಲವು ರೈತರು ಕೃಷಿ ಕಚೇರಿಗೆ ಬಂದು ತಾಲೂಕಿನಲ್ಲಿ ಕೆಲವೊಂದು ರಸಗೊಬ್ಬರ ವಿತರಕರು ಡಿಎಪಿ, ಯೂರಿಯಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ದೂರಿದ್ದಾರೆ. ಕಾರಣ ರಸಗೊಬ್ಬರ ಮಾರಾಟಗಾರರು ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಾರಾಟ ದರದಲ್ಲೇ ರಸಗೊಬ್ಬರ ಮಾರಬೇಕು. ರೈತರಿಗೆ ಕಡ್ಡಾಯವಾಗಿ ಅಧಿಕೃತ ಬಿಲ್‌ ನೀಡಬೇಕು ಎಂದು ಸೂಚಿಸಿದರು.

ಪ್ರತಿ ರಸಗೊಬ್ಬರ ವಿತರಕರು ತಮ್ಮ ಅಂಗಡಿಯಲ್ಲಿ ದಾಸ್ತಾನು ಇರುವ ರಸಗೊಬ್ಬರ ಮಾಹಿತಿಯನ್ನು ಕೃಷಿ ಇಲಾಖೆಗೆ ಪ್ರತಿದಿನ ಸಲ್ಲಿಸಬೇಕು ಎಂದು ಹೇಳಿದರು.

ತಾಂತ್ರಿಕ ಕೃಷಿ ಅಧಿಕಾರಿ ಪವನಕುಮಾರ ಕಟ್ಟಿಮನಿ, ಸಹಾಯಕ ಕೃಷಿ ಅಧಿಕಾರಿಗಳಾದ ಶಿವಲಿಂಗಪ್ಪ ಅವಂಟಿ, ಅನಿಲದೇವ, ತಾಲೂಕು ಆಗ್ರೋ ಅಸೋಷಿಯೇಶನ್‌ ಸಂಘದ ಅದ್ಯಕ್ಷ ದಯಾನಂದ ದೇವರಮನಿ, ಮಲ್ಲಿಕಾರ್ಜುನ ಪಾಟೀಲ ಬಿರಾಳ, ಈರಣ್ಣ ಬನ್ನೆಟ್ಟಿ, ಶಿವಶಂಕರ ಪಾಟೀಲ ಹಳ್ಳಿ, ಸತೀಶಬಾಬು ಹರವಾಳ, ಶರಣಗೌಡ ಹಳ್ಳಿ, ಮಹ್ಮದ್‌ ಸೋಫಿ ಗಂವ್ಹಾರ, ಶಿವರೆಡ್ಡಿ ಹಾಗೂ ತಾಲೂಕಿನ ವಿವಿಧ ರಸಗೊಬ್ಬರ ವಿತರಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next