Advertisement
ಖಾಂಡ್ವಾ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಇವರನ್ನು ಬಂಧಿಸಿದ್ದಾರೆ. ಈ ಪೈಕಿ ಓರ್ವನ ವಿರುದ್ಧ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರದೇಶವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಹೀಗಾಗಿ ಎನ್ಎಸ್ಎ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ಸಿದ್ದಾರ್ಥ ಬಹುಗುಣ ಹೇಳಿದ್ದಾರೆ. ಸ್ಥಳದಲ್ಲಿ ಗೋವಿನ ಚರ್ಮ ಸಿಕ್ಕಿದೆ. ಪೊಲೀಸರು ದಾಳಿ ನಡೆಸಿದ ವೇಳೆ ಆಜಂ ತಪ್ಪಿಸಿಕೊಂಡಿದ್ದ. ಸೋಮಾರ ಈತನನ್ನು ಬಂಧಿಸಲಾಗಿದೆ. ನದೀಮ್ ಹಾಗೂ ಶಕೀಲ್ರನ್ನು ಫೆಬ್ರವರಿ 1 ರಂದೇ ಬಂಧಿಸಲಾಗಿತ್ತು. ಬುಲಂದ್ಶಹರ್ನಲ್ಲಿ ಇದೇ ಮಾದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉ.ಪ್ರ.ಸರಕಾರ ಕ್ರಮ ಕೈಗೊಂಡಿದ್ದಾಗ ಟೀಕೆ ವ್ಯಕ್ತವಾಗಿತ್ತು.
ವಿವಾದಕ್ಕೀಡಾದ ಮ.ಪ್ರ ಸಿಎಂ ಕಮಲ್ನಾಥ್ ಕಠಿಣ ಕ್ರಮ
ನದೀಮ್, ಶಕೀಲ್, ಅಜಂ ಬಂಧಿಸಿದ್ದ ಮಧ್ಯ ಪ್ರದೇಶದ ಪೊಲೀಸರು