Advertisement

ಗೋ ಹಂತಕರ ವಿರುದ್ಧ ಕ್ರಮ!

12:30 AM Feb 07, 2019 | Team Udayavani |

ಭೋಪಾಲ: ಗೋ ರಕ್ಷಣೆಗೆ ನಮ್ಮ ಸರಕಾರ ಕಟಿ ಬದ್ದ ಎಂದು ಬಿಂಬಿಸುವ ಉದ್ದೇಶದಿಂದ ಗೋ ಹಂತಕರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸಿಎಂ ಕಮಲ್‌ ನಾಥ್‌ ಕ್ರಮ ವಿವಾದಕ್ಕೀಡಾಗಿದೆ. ಮಧ್ಯಪ್ರದೇಶದ ಖಾಂಡ್ವಾದಲ್ಲಿ ಈ ಪ್ರಕರಣ ನಡೆದಿದ್ದು, ನದೀಮ್‌, ಶಕೀಲ್‌ ಮತ್ತು ಅಜಮ್‌ರನ್ನು ಬಂಧಿಸಲಾಗಿದೆ. ದೇಶದ ಭದ್ರತೆಗೆ ಅಪಾಯ ಒಡ್ಡುವ ಆರೋಪಿಗಳನ್ನು ಈ ಕಾಯ್ದೆ ಅಡಿಯಲ್ಲಿ ಬಂಧಿಸಲಾಗುತ್ತಿತ್ತು. ಅದರೆ ಈಗ ಗೋವನ್ನು ಹತ್ಯೆಗೈದವರ ವಿರುದ್ಧವೂ ಈ ಕಾಯ್ದೆ ಪ್ರಯೋಗಿಸಿದ್ದು ಆಕ್ಷೇಪಕ್ಕೆ ಕಾರಣವಾಗಿದೆ.

Advertisement

ಖಾಂಡ್ವಾ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಇವರನ್ನು ಬಂಧಿಸಿದ್ದಾರೆ. ಈ ಪೈಕಿ ಓರ್ವನ ವಿರುದ್ಧ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರದೇಶವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಹೀಗಾಗಿ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಎಸ್‌ಪಿ ಸಿದ್ದಾರ್ಥ ಬಹುಗುಣ ಹೇಳಿದ್ದಾರೆ. ಸ್ಥಳದಲ್ಲಿ ಗೋವಿನ ಚರ್ಮ ಸಿಕ್ಕಿದೆ. ಪೊಲೀಸರು ದಾಳಿ ನಡೆಸಿದ ವೇಳೆ ಆಜಂ ತಪ್ಪಿಸಿಕೊಂಡಿದ್ದ. ಸೋಮಾರ ಈತನನ್ನು ಬಂಧಿಸಲಾಗಿದೆ. ನದೀಮ್‌ ಹಾಗೂ ಶಕೀಲ್‌ರನ್ನು ಫೆಬ್ರವರಿ 1 ರಂದೇ ಬಂಧಿಸಲಾಗಿತ್ತು. ಬುಲಂದ್‌ಶಹರ್‌ನಲ್ಲಿ ಇದೇ ಮಾದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉ.ಪ್ರ.ಸರಕಾರ ಕ್ರಮ ಕೈಗೊಂಡಿದ್ದಾಗ ಟೀಕೆ ವ್ಯಕ್ತವಾಗಿತ್ತು.

ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧನ
ವಿವಾದಕ್ಕೀಡಾದ ಮ.ಪ್ರ ಸಿಎಂ ಕಮಲ್‌ನಾಥ್‌ ಕಠಿಣ ಕ್ರಮ
ನದೀಮ್‌, ಶಕೀಲ್‌, ಅಜಂ ಬಂಧಿಸಿದ್ದ ಮಧ್ಯ ಪ್ರದೇಶದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next