Advertisement

ಪಾಕ್ ರೆಸ್ಟೋರೆಂಟ್ ನಲ್ಲಿ ನೀಡಿದ ನೀರಿನ ಬಾಟಲಿಯಲ್ಲಿ ಆ್ಯಸಿಡ್ : ಹೋಟೆಲ್ ಮ್ಯಾನೇಜರ್ ಬಂಧನ

03:49 PM Oct 04, 2022 | Team Udayavani |

ಪೇಶಾವರ : ಹುಟ್ಟುಹಬ್ಬ ಆಚರಣೆಗಾಗಿ ಹೋಟೆಲ್ ಗೆ ಬಂದಿದ್ದ ಕುಟುಂಬದ ಸದಸ್ಯರಿಗೆ ನೀರಿನ ಬಾಟಲ್ ನಲ್ಲಿ ಆ್ಯಸಿಡ್ ನೀಡಿದ ಆರೋಪದ ಮೇರೆಗೆ ಹೋಟೆಲ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಅಂದಹಾಗೆ ಈ ಘಟನೆ ನಡೆದಿದ್ದು ಸೆಪ್ಟೆಂಬರ್ 27 ರಂದು. ಐತಿಹಾಸಿಕ ಗ್ರೇಟರ್ ಇಕ್ಬಾಲ್ ಪಾರ್ಕ್‌ನ ‘ಪೊಯೆಟ್ ರೆಸ್ಟೋರೆಂಟ್’ ನಲ್ಲಿ ಮುಹಮ್ಮದ್ ಆದಿಲ್ ಅವರ ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಣೆಗೆ ಬಂದಿದ್ದರು, ಈ ವೇಳೆ ಹೋಟೆಲ್ ಮ್ಯಾನೇಜರ್ ಬಂದವರಿಗೆ ನೀರಿನ ಬಾಟಲ್ ನೀಡಿದ್ದಾರೆ, ಈ ಸಂದರ್ಭ ಓರ್ವ ಸದಸ್ಯ ನೀರಿನಿಂದ ಕೈ ತೊಳೆದಿದ್ದಾರೆ ಇದು ಆದ ಕೆಲವೇ ಹೊತ್ತಿನಲ್ಲಿ ಆತನ ಕೈ ಉರಿಯಲು ಪ್ರಾರಂಭಿಸಿದೆ ಜೊತೆ ಕೈಗಳಲ್ಲಿ ಸುಟ್ಟ ಗಾಯಗಳಾಗಿತ್ತು, ಇಷ್ಟಾಗುವ ಹೊತ್ತಿಗೆ ಅಲ್ಲಿದ ಎರಡೂವರೆ ವರ್ಷದ ಮಗು ಬಾಟಲಿಯಲ್ಲಿದ್ದ ನೀರನ್ನು ಕುಡಿದಿದೆ, ಅಲ್ಲದೆ ಮಗು ವಾಂತಿ ಮಾಡಲು ಪ್ರಾರಂಭಿಸಿದೆ, ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿ ರೆಸ್ಟೋರೆಂಟ್ ವಿರುದ್ಧ ಕುಟುಂಬ ಸದಸ್ಯರು ದೂರು ದಾಖಲಿಸಿದ್ದರು, ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ರೆಸ್ಟೋರೆಂಟ್ ನಲ್ಲಿ ನೀಡಿದ್ದ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ ಈ ವೇಳೆ ಅದರಲ್ಲಿ ಆ್ಯಸಿಡ್ ಅಂಶ ಇರುವುದು ಪತ್ತೆಯಾಗಿದೆ.

ನಾವು ರೆಸ್ಟೋರೆಂಟ್ ಮ್ಯಾನೇಜರ್ ಮುಹಮ್ಮದ್ ಜಾವೇದ್ ಅವರನ್ನು ಬಂಧಿಸಿದ್ದೇವೆ ಮತ್ತು ದೂರುದಾರರು ಸೂಚಿಸಿದ ಇತರರನ್ನು ಬಂಧಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಾಹಿರ್ ವಕಾಸ್ ಸೋಮವಾರ ಪಿಟಿಐಗೆ ತಿಳಿಸಿದರು.

ಸದ್ಯ ಮಗುವಿನ ಸ್ಥಿತಿ ಗಂಭೀರವಾಗಿದ್ದು, ನೀರಿನ ಬಾಟಲ್ ಗೆ ಆಸಿಡ್ ಹೇಗೆ ಬಂತೆಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

Advertisement

ಇದನ್ನೂ ಓದಿ : ನರಗುಂದದಲ್ಲಿ ಅಪರೂಪದ ಹಕ್ಕಿರೆಕ್ಕೆ ಚಿಟ್ಟೆ; ­ಬಹುದೂರ, ಎತ್ತರ ಹಾರುವ ಸಾಮರ್ಥ್ಯ

Advertisement

Udayavani is now on Telegram. Click here to join our channel and stay updated with the latest news.

Next