Advertisement

ಠಾಣೆಯಿಂದ ಪರಾರಿಯಾಗುವಾಗ ಸ್ಕೈವಾಕ್‌ನಿಂದ ಬಿದ್ದು ಆರೋಪಿ ಸಾವು

11:19 AM Dec 21, 2021 | Team Udayavani |

 ಕೆ.ಆರ್‌.ಪುರಂ: ಮಹಿಳೆಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಸ್ಕೈವಾಕ್‌ನಿಂದ ಕೆಳಗೆ ಜಿಗಿದು ಸ್ಥಳದಲ್ಲೇ ಸಾವನ್ನಪಿರುವ ಘಟನೆ ಕೆ.ಆರ್‌.ಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೆ.ಆರ್‌.ಪುರದ ವಿಜಿನಾಪುರ ನಿವಾಸಿ ಶಕ್ತಿವೇಲು (32) ಮೃತಪಟ್ಟ ಆರೋಪಿ. 7 ವರ್ಷದ ಹಿಂದೆ ಶಕ್ತಿವೇಲು ಸಂಗೀತಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಕೆಲ ತಿಂಗಳಿಂದ ಕೌಟುಂಬಿಕ ಕಲಹ ಉಂಟಾಗಿದ್ದು, ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಶಕ್ತಿವೇಲು ತನ್ನ ಪತ್ನಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದ. ಪತಿಯ ಕಿರುಕುಳ ತಾಳಲಾರದೇ ಸಂಗೀತಾ ಶನಿವಾರ ಡೆತ್‌ನೋಟ್‌ ಬರೆದಿಟ್ಟು ಮನೆಯ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈ ಸಂಬಂಧ ಸಂಗೀತಾ ಪಾಲಕರು ತಮ್ಮ ಮಗಳ ಸಾವಿಗೆ ಆಕೆಯ ಪತಿ ಶಕ್ತಿವೇಲು ಕಾರಣ ಎಂದು ಆರೋಪಿಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಜತೆಗೆ ಪತಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಗೀತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಳು. ಈ ಆಧಾರದ ಮೇಲೆ ಶಕ್ತಿವೇಲು ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡ ಕೆ.ಆರ್‌ .ಪುರಂ ಪೊಲೀಸರು ಭಾನುವಾರ ಸಂಜೆ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ರಾತ್ರಿಯಿಡಿ ಇದ್ದ ಶಕ್ತಿವೇಲುನನ್ನು ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು.

ಘಟನೆ ನಡೆದದ್ದು ಹೇಗೆ?:

ಸೋಮವಾರ ಮುಂಜಾನೆ ಆರೋಪಿ ಶಕ್ತಿವೇಲು ಶೌಚಗೃಹಕ್ಕೆ ಹೋಗಬೇಕು ಎಂದು ಠಾಣೆಯಲ್ಲಿದ್ದ ಕಾನ್ಸ್‌ ಟೇಬಲ್‌ ಬಳಿ ಕೇಳಿಕೊಂಡಿದ್ದ. ಅದಕ್ಕೆ ಪೊಲೀಸ್‌ ಕಾನ್‌ಸ್ಟೆàಬಲ್‌ ಆತನನ್ನು ಶೌಚಗೃಹದ ಬಳಿ ಕರೆದೊಯ್ದು ಮತ್ತೆ ಕರೆತರುತ್ತಿ¨ªಾಗ, ಏಕಾಏಕಿ ಠಾಣೆಯಿಂದ ಹೊರಗೆ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಠಾಣೆಯಲ್ಲಿದ್ದ ಪೊಲೀಸ್‌ ಸಿಬ್ಬಂದಿ ದ್ವಿಚಕ್ರವಾಹನದಲ್ಲಿ ಆರೋಪಿಯನ್ನು ಬೆನ್ನಟ್ಟಿಕೊಂಡು ಹೋಗಿದ್ದರು. ಪೊಲೀಸರು ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಆತಂಕಗೊಂಡ ಆರೋಪಿ ಶಕ್ತಿವೇಲು, ಐಟಿಐ ಗೇಟ್‌ನ ಸ್ಕೆçವಾಕ್‌ ಮೇಲಿಂದ ಕೆಳಗೆ ಜಿಗಿದಿ¨ªಾನೆ. ಪರಿಣಾಮ ಸ್ಕೈವಾಕ್‌ನಿಂದ ಕೆಳಗಿನ ರಸ್ತೆಗೆ ಬಿದ್ದು ತಲೆ, ಕೈ, ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದವು. ಅದೇ ವೇಳೆ ಸ್ಕೆçವಾಕ್‌ ಕೆಳಗಿನ ರಸ್ತೆಯಲ್ಲಿ ಬಂದ ಕಾರು ಸಹ ಶಕ್ತಿವೇಲುಗೆ ತಾಗಿದೆ. ಬಳಿಕ ಶಕ್ತಿವೇಲು ಸ್ಥಳದಲ್ಲೇ ಮೃತಪಟ್ಟಿದ್ದ. ಕೆ.ಆರ್‌. ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next