Advertisement

ಗಾಂಜಾ ಪ್ರಕರಣದ ಆರೋಪಿ ಸಾವು

01:12 AM Mar 06, 2024 | Team Udayavani |

ಕುಂಬಳೆ: ಮಾದಕ ದ್ರವ್ಯ ಗಾಂಜಾ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿದ ಯುವಕ ಸಾವಿಗೀಡಾದ ಘಟನೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಮೀಯಪದವಿನಲ್ಲಿ ನಡೆದಿದೆ.

Advertisement

ಸ್ಥಳೀಯ ಮದಕ್ಕಳದ ಮೊಯಿದ್ದೀನ್‌ ಆರಿಫ್‌ (22) ರವಿವಾರ ಗಾಂಜಾ ಅಮಲಿನಲ್ಲಿ ಗಲಾಟೆ ಮಾಡುತ್ತಿರುವಾಗ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಈತನನ್ನು ಬಂಧಿಸಿ ಕೇಸು ದಾಖಲಿಸಿದ್ದರು. ಆ ಬಳಿಕ ಈತನನ್ನು ಸಂಬಂಧಿಕರಾದ ಅಬ್ದುಲ್‌ ರಶೀದ್‌ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದರು.
ಸೋಮವಾರ ಬೆಳಗ್ಗೆ ಮನೆಯಲ್ಲಿ ಆರಿಫ್‌ ರಕ್ತವಾಂತಿ ಮಾಡಿದಾಗ ಈತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾ ಗಿದ್ದನು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಈತನ ಮೈಮೇಲೆ ಗಾಯವಾಗಿದ್ದು ಮೃತದೇಹವನ್ನು ಪರಿಯಾರಂ ಆಸ್ಪತ್ರೆಗೆ ಒಯ್ಯಲಾಗಿದೆ.

ಮೃತನನ್ನು ಮನೆಗೆ ಕರೆದೊಯ್ದ ಅಬ್ದುಲ್‌ ರಶೀದ್‌ನನ್ನು ಪೊಲೀಸರು ಹೆಚ್ಚಿನ ತನಿಖೆಗೊಳ ಪಡಿಸಿದ್ದಾರೆ. ಸಾವಿಗೀಡಾದ ಯುವಕ ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುವಾಗ ಹಾರಿದ ಕಾರಣ ಬಿದ್ದು ಗಾಯ ಗೊಂಡಿರುವುದಾಗಿ ಪೊಲೀಸರುತಿಳಿಸಿದ್ದಾರೆ. ಆದರೆ ಸ್ಥಳೀಯರು ಪೊಲೀಸರು ಈತನ ಮೇಲೆ ಹಲ್ಲೆ ನಡೆಸಿದ ಕಾರಣ ಸಾವಿಗೀಡಾ ಗಿರುವುದಾಗಿ ಆರೋಪಿಸುತ್ತಿದ್ದು ವೈದ್ಯರ ವರದಿಯ ಬಳಿಕ ಸತ್ಯ ಬಯಲಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next