Advertisement

ಗುಂಡ್ಲುಪೇಟೆ :ಕಾಡು ಹಂದಿ‌ ಬೇಟೆ: ಮೂವರ ಬಂಧನ

06:11 PM Jul 05, 2022 | Team Udayavani |

ಗುಂಡ್ಲುಪೇಟೆ (ಚಾಮರಾಜನಗರ): ಮಾಂಸಕ್ಕಾಗಿ ಕಾಡು ಹಂದಿಯನ್ನು ಕೊಂದು ಶೇಖರಿಸಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲ ಸ್ವಾಮಿ ಬೆಟ್ಟ ವಲಯದ ಲಕ್ಕಿಪುರ ಗ್ರಾಮದ ಬಳಿ ನಡೆದಿದೆ.

Advertisement

ಬೇರಂಬಾಡಿ ಗ್ರಾಮದ ಸಂತೋಷ, ಕೃಷ್ಣ ಮತ್ತು ಬಂಗಾರ ಮೂವರು ಬಂಧಿತ ಆರೋಪಿಗಳು. ಇವರು ಲಕ್ಕಿಪುರದ ಲಕ್ಕಿಕಟ್ಟೆಯ ಬಳಿ ಕಾಡು ಹಂದಿ ಕೊಂದು ಅದನ್ನು ಶೇಖರಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ  ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ನವೀನ್ ಕುಮಾರ್, ಸಿಬ್ಬಂದಿಗಳಾದ ಜ್ಞಾನಶೇಖರ, ವಿಜಯ್, ಬರ್ಕತ್ ಅಲಿ, ಮಂಜುನಾಥ್ ನಾಯಕ್ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next