Advertisement

ಸ್ನೇಹಿತೆಯ ಜತೆ ಹೋಗುತ್ತಿದ್ದವನನ್ನು ಹಲ್ಲೆಗೈದು ಸುಲಿಗೆ: ಮೂವರ ಬಂಧನ

01:21 PM Jul 16, 2022 | Team Udayavani |

ಬೆಂಗಳೂರು: ಸ್ನೇಹಿತೆಯ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ಯವಕನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಮೂವರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ದೇವನಹಳ್ಳಿಯ ಅನಿಲ್‌ ಕುಮಾರ್‌ (22), ಸುಬ್ರಹ್ಮಣಿ (19) ಹಾಗೂ ಪವನ್‌ ಕುಮಾರ್‌ (24) ಬಂಧಿತರು.

ಜು.8ರಂದು ರಾತ್ರಿ 10.30ಕ್ಕೆ ಕಿರಣ್‌ ಎಂಬಾತ ತನ್ನ ಗೆಳತಿ ಜತೆಗೆ ದೇವನಹಳ್ಳಿಯ ಹೋಟೆಲ್‌ನಲ್ಲಿ ಊಟ ಮಾಡಿ, ಬೈಕ್‌ನಲ್ಲಿ ದೇವನಹಳ್ಳಿಯಿಂದ ಬೆಂಗಳೂರು ನಗರದ ಕಡೆ ಬರುತ್ತಿದ್ದರು. ಮಾರ್ಗಮಧ್ಯೆ ದೇವನಹಳ್ಳಿ ಬೈಪಾಸ್‌ ಬಳಿ ಮೂತ್ರ ವಿಸರ್ಜನೆಗೆಂದು  ಕಿರಣ್‌, ಬೈಕ್‌ ನಿಲುಗಡೆ ಮಾಡಿದ್ದರು. ಈ ವೇಳೆ ಕಾರಿನಲ್ಲಿ ಅಲ್ಲಿಗೆ ಬಂದ ಆರೋಪಿಗಳು ಕಿರಣ್‌ನ ಎಡಗಾಲಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು. ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಸರ ಕಸಿದುಕೊಂಡಿದ್ದರು. ನಂತರ ಹಣ ಕೊಡುವಂತೆ ಬೆದರಿಸಿದ್ದರು. ಹಣ ಕೊಡದಿದ್ದರೆ ನಿನ್ನ ಪ್ರೇಯಸಿಯನ್ನು ಇಲ್ಲೇ ಮುಗಿಸುವುದಾಗಿ ಬೆದರಿಸಿದ್ದರು. ನನ್ನ ಬಳಿ ಹಣ ಇಲ್ಲ, ಎಟಿಎಂನಲ್ಲಿ ಡ್ರಾ ಮಾಡಿಕೊಡುವುದಾಗಿ ಕಿರಣ್‌ ಆರೋಪಿಗಳಿಗೆ ಹೇಳಿದ್ದರು.

ವಿಜಯಪುರ ಕ್ರಾಸ್‌ ಬಳಿಯಿದ್ದ ಎಟಿಎಂಗೆ ಆರೋಪಿಗಳೊಂದಿಗೆ ಬಂದ ಕಿರಣ್‌ 15 ಸಾವಿರ ರೂ. ಡ್ರಾ ಮಾಡಿ ಕೊಟ್ಟಿದ್ದರು. ಹಣ ಸಿಕ್ಕ ಬಳಿಕ ಆರೋಪಿಗಳು ಇಬ್ಬರನ್ನೂ ಬಿಟ್ಟು ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next