Advertisement

ಬಿಎಸ್‌ವೈ ಪ್ರಕಾರ ಸಿದ್ದು ಸರ್ಕಾರದ 4 ಸಾಧನೆಗಳು ಯಾವುದು ಗೊತ್ತೇ?

11:07 AM May 13, 2017 | Team Udayavani |

ಮಂಗಳೂರು : ಮಾಜಿ ಮುಖ್ಯಮಂತ್ರಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಕರಾವಳಿ ಪ್ರವಾಸದಲ್ಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿ ಯಾವ ಸಾಧನೆಗಾಗಿ 4 ವರ್ಷಗಳ ಸಾಧನಾ ಸಮಾವೇಶವನ್ನು ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ  ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನಾಲ್ಕು ವರ್ಷದ ಸಾಧನೆಗಳೆಂದು ದೇಶದಲ್ಲೇ ಅಂತ್ಯಂತ ಭ್ರಷ್ಟ ರಾಜ್ಯ ಎಂಬ ಹಣೆ ಪಟ್ಟಿಗೆ ಗುರಿಯಾಗಿರುವುದು,2ನೇ ಸಾಧನೆಯೆಂದರೆ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು, 3 ನೇ ಸಾಧನೆಯೆಂದರೆ ಕೇಂದ್ರ ಸರ್ಕಾರ ಅನುದಾನ ಕೊಟ್ಟರೂ ಸಾಲ ಮಾಡಿರುವುದು ಮತ್ತು ನಾಲ್ಕನೆ  ಸಾಧನೆಯೆಂದರೆ ಬರಗಾಲವಿದ್ದರೂ ರೈತರ ಸಾಲ ಮನ್ನಾ ಮಾಡದೆ ಇರುವುದು.’ ಎಂದು ವಾಗ್ದಾಳಿ ನಡೆಸಿದರು. 

‘ಬಿಜೆಪಿಯಲ್ಲಿ  ಭಿನ್ನಮತವಿಲ್ಲ, ಮೇ 18 ರಿಂದ ಎಲ್ಲಾ ನಾಯಕರೂ ಒಟ್ಟಾಗಿ ರಾಜ್ಯ ಪ್ರವಾಸ ಆರಂಭಿಸುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಮತ್ತು ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next