Advertisement

ಅಪಘಾತ; ತಹಶೀಲ್ದಾರ್‌ ಸಹಾಯ ಹಸ್ತ

03:21 PM Feb 18, 2022 | Team Udayavani |

ಯಡ್ರಾಮಿ: ಬೈಕ್‌ ಅಪಘಾತದಲ್ಲಿ ರಸ್ತೆ ಮೇಲೆ ಬಿದ್ದು ಒದ್ದಾಡುತ್ತಿರುವ ಯುವಕನನ್ನು ತಮ್ಮ ಸ್ವಂತ ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ ತಹಶೀಲ್ದಾರ್‌ ಶಾಂತಗೌಡ ಬಿರಾದಾರ.

Advertisement

ಹರನಾಳ ಕ್ರಾಸ್‌ ಹತ್ತಿರ ಬರುತ್ತಿದ್ದಂತೆ ಹಂಗರಗಾ (ಬಿ) ಗ್ರಾಮದ ವಿಶ್ವನಾಥ ಹಿರೇಮಠ ಎನ್ನುವರು ಅಪಘಾತಕ್ಕೆ ಈಡಾಗಿ ನರುಳುತ್ತಿದ್ದರು. ಇದೆ ವೇಳೆ ತಹಶೀಲ್ದಾರ್‌ ತಮ್ಮ ಕಚೇರಿ ಕೆಲಸ ಮುಗಿಸಿಕೊಂಡು ಕಲಬುರಗಿಗೆ ಹೋಗುತ್ತಿದ್ದರು. ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ ತಹಶೀಲ್ದಾರ್‌ರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೇವರ್ಗಿ ಆಸ್ಪತ್ರೆಗೆ ದಾಖಲಿಸಿದರು.

ಹಂಗರಗಿಯಿಂದ ಯಡ್ರಾಮಿಗೆ ಹೋಗುವಾಗ ರಸ್ತೆ ಮಧ್ಯೆ ಟಿಪ್ಪರ್‌ ಅತೀ ವೇಗವಾಗಿ ಸಂಚರಿಸುತ್ತಿದ್ದಾಗ ಕಿರಿದಾದ ರಸ್ತೆಯಲ್ಲಿ ಬೈಕ್‌ ಸವಾರನು ರಸ್ತೆ ಪಕ್ಕಕ್ಕೆ ತೆಗೆದುಕೊಳ್ಳುವಾಗ ಆಯತಪ್ಪಿ ಬಿದ್ದಿದ್ದ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next