Advertisement

ಬಂಟ್ವಾಳ ಸಮೀಪ ಜಕ್ರಿಬೆಟ್ಟು  ಜಂಕ್ಷನ್‌ನಲ್ಲಿ ಬಸ್‌ ಢಿಕ್ಕಿ 

10:06 AM Oct 08, 2018 | |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಂಟ್ವಾಳ-ಬೆಳ್ತಂಗಡಿ ರಸ್ತೆಯ ಜಕ್ರಿಬೆಟ್ಟು ಜಂಕ್ಷನ್‌ನಲ್ಲಿ ಸರಕಾರಿ ಬಸ್‌ ಢಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರರಿಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಮಂಗಳೂರು ತಾಲೂಕು ಉರ್ವಾ ನಿವಾಸಿ ಚರಣ್‌ (20) ಮತ್ತು ಬಂಟ್ವಾಳ ತಾಲೂಕು ವಾಮದಪದವು ಮಜಲೋಡಿ ನಿವಾಸಿ ಮಹಮದ್‌ ನೌಶಾದ್‌ (20 ) ಮೃತ ಯುವಕರು.

ರವಿವಾರ ಬೆಳಗ್ಗೆ 9.30ಕ್ಕೆ ಈ ದುರ್ಘ‌ಟನೆ ನಡೆದಿದೆ. ಧರ್ಮಸ್ಥಳದಿಂದ ಮಂಗಳೂರಿನತ್ತ ತೆರಳುತ್ತಿದ್ದ ಸರಕಾರಿ ಬಸ್‌ಗೆ ಬೈಕ್‌ ಮುಖಾಮುಖೀ ಢಿಕ್ಕಿಯಾಗಿದ್ದು, ಸವಾರರಿಬ್ಬರೂ ಬೈಕ್‌ ಸಹಿತ ಬಸ್‌ನ ಬಲ ಬದಿಯ ಚಕ್ರದಡಿಗೆ ಸಿಲುಕಿಕೊಂಡಿದ್ದರು. ಹೆಲ್ಮೆಟ್‌ ಧರಿಸಿದ್ದರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿ ಸುವ ದಾರಿಯಲ್ಲಿ ಮೃತಪಟ್ಟಿದ್ದಾಗಿ ಬಂಟ್ವಾಳ ಸಂಚಾರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಘಟನೆ ಯಲ್ಲಿ ಬೈಕ್‌ ಸಂಪೂರ್ಣ ನಜ್ಜು ಗುಜ್ಜಾಗಿದೆ. ಜಕ್ರಿಬೆಟ್ಟು ಜಂಕ್ಷನ್‌ ಅಪಾಯ ಕಾರಿ ಅಲ್ಲವಾದರೂ ಘಟನೆ ನಡೆದಿರುವ ಸ್ಥಳದಲ್ಲಿ ಇರುವ ತಿರುವು ಮತ್ತು ಎರಡೂ ವಾಹನಗಳ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ನೆರವಿಗೆ ಧಾವಿಸಿದ ಸ್ಥಳೀಯರು
ಘಟನೆ ನಡೆದ ತತ್‌ಕ್ಷಣ ಸ್ಥಳೀಯ ನಿವಾಸಿಗಳು ಸಹಾಯಕ್ಕೆ ಧಾವಿಸಿ ಬಸ್‌ ಚಕ್ರದಡಿ ಸಿಲುಕಿ ಚಿಂತಾಜನಕ ಸ್ಥಿತಿ ಯಲ್ಲಿದ್ದ ಯುವಕರನ್ನು ಹರಸಾಹಸ ಪಟ್ಟು ಹೊರಗೆತ್ತಿದರು. ಗಂಭೀರ ಗಾಯಗೊಂಡಿದ್ದ ಅವರನ್ನು 108 ಆ್ಯಂಬ್ಯುಲೆನ್ಸ್‌Õ ಮೂಲಕ ಮೊದಲಿಗೆ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಂಬೆಯ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ದಾರಿಮಧ್ಯೆ ನೌಶಾದ್‌ ಮೃತಪಟ್ಟಿದ್ದರು. ಚರಣ್‌ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಅವರೂ ಮೃತಪಟ್ಟರು. 
ನೌಶಾದ್‌ ಮೃತದೇಹವನ್ನು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಮತ್ತು ಚರಣ್‌ ಮೃತ ದೇಹ ವನ್ನು ಮಂಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.

ಬಂಟ್ವಾಳ ಸಂಚಾರ ಠಾಣೆ ಎಸ್‌.ಐ. ಮಂಜುಳಾ ಕೆ.ಎಂ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ದುರ್ಘ‌ಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೆರವು ನೀಡುವುದಕ್ಕಾಗಿ ಆಸ್ಪತ್ರೆಗೆ ಧಾವಿಸಿದರು.

Advertisement

ಪ್ರತಿಭಾನ್ವಿತ ವಿದ್ಯಾರ್ಥಿಗಳು
ಮೃತ ಚರಣ್‌ ಮತ್ತು ನೌಶಾದ್‌ ಸೈಂಟ್‌ ಅಲೋಶಿಯಸ್‌ ಐಟಿಐ ಕಾಲೇಜಿನ ತೃತೀಯ ಸೆಮಿಸ್ಟರ್‌ ವಿದ್ಯಾರ್ಥಿಗಳಾಗಿದ್ದು, ಸ್ನೇಹಿತರು. ಮಂಗಳೂರಿನಿಂದ ಚರಣ್‌ ಅವರ ದ್ವಿಚಕ್ರ ವಾಹನದಲ್ಲಿ ವಾಮದಪದವಿನ ನೌಶಾದ್‌ ಮನೆಯತ್ತ ಹೊರಟಿದ್ದರು. ಚರಣ್‌ ಬೈಕ್‌ ಚಲಾಯಿಸುತ್ತಿದ್ದರು. ಗಂಗಾಧರ ಶ್ರೀಯಾನ್‌-ಶೋಭಾ ದಂಪತಿಯ ಏಕೈಕ ಪುತ್ರ ಚರಣ್‌ ಪ್ರತಿಭಾವಂತ ವಿದ್ಯಾರ್ಥಿ. ಅವರು ಕಟ್ಟಿಸಿದ ನೂತನ ಮನೆಯ ಗೃಹ ಪ್ರವೇಶ ವನ್ನು ಮುಂದಿನ ತಿಂಗಳು ನಡೆಸಲು ಸಿದ್ಧತೆಗಳು ನಡೆದಿದ್ದು, ಇದ್ದೊಬ್ಬ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

ನೌಶಾದ್‌ ಮೂಡನಡುಗೋಡು ಗ್ರಾಮದ ಮಜಲೋಡಿ ನಿವಾಸಿ ಅಬ್ದುಲ್‌ ಮಜೀದ್‌ ಅವರ ಮೂವರು ಪುತ್ರರಲ್ಲಿ ಕೊನೆಯವರು. ನೌಶಾದ್‌ಗೆ ಸಹೋದರ ಮತ್ತು ಸಹೋದರಿ ಇದ್ದಾರೆ. ನೌಶಾದ್‌ ಕೂಡ ಪ್ರತಿಭಾವಂತ ವಿದ್ಯಾರ್ಥಿ. ತಂದೆ ಮಜೀದ್‌ ಅಂಗಡಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next