Advertisement

ಅಪಘಾತ-ಅಪರಾಧ ಸುದ್ದಿಗಳು

07:00 AM Aug 07, 2017 | Team Udayavani |

ಬೈಕ್‌ ಢಿಕ್ಕಿ: ಪಾದಚಾರಿಗೆ ಗಾಯ
ಕುಂದಾಪುರ:
ಆಜ್ರಿ ಗ್ರಾಮದ ಆಜ್ರಿ-ಮಾನಂಜೆ ಸೊಸೈಟಿ ಬಳಿ ಶುಕ್ರವಾರ ಸಂಜೆ ನಡೆದುಕೊಂಡು ಹೋಗುತ್ತಿದ್ದ ಆಜ್ರಿಯ ಸತ್ಯಜಿತ್‌ ಅವರಿಗೆ ಬೈಕ್‌ ಢಿಕ್ಕಿಯಾಗಿ ಗಾಯಗೊಂಡಿದ್ದಾರೆ.ಸತ್ಯಜಿತ್‌ ಅವರು ಆಜ್ರಿ ಕಡೆಯಿಂದ ಆಜ್ರಿ ಬಾಳೆಗದ್ದೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬೈಕ್‌ ಢಿಕ್ಕಿ ಹೊಡೆದಿತ್ತು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾರು ಢಿಕ್ಕಿ: ಬೈಕ್‌ ಸವಾರನಿಗೆ ಗಾಯ
ಕುಂದಾಪುರ:
 ಇಲ್ಲಿನ ಪಾರಿಜಾತ ಸರ್ಕಲ್‌ ಬಳಿ ಶುಕ್ರವಾರ ರಾತ್ರಿ ಕಾರು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ನಾನಾಸಾಹೇಬ್‌ ರಸ್ತೆಯ ಶಿವಕುಮಾರ್‌ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಸ್ತ್ರಿ ವೃತ್ತದಿಂದ ಕುಂದಾಪುರ ಹೊಸ ಬಸ್ಸು ನಿಲ್ದಾಣಕ್ಕೆ  ಹೋಗುತ್ತಿದ್ದ ಶಿವಕುಮಾರ್‌ ಅವರ ಬೈಕ್‌ಗೆ ಚರ್ಚ್‌ ರಸ್ತೆಯಿಂದ ಶಾಸ್ತ್ರಿ ಸರ್ಕಲ್‌ ಕಡೆಗೆ ಹೋಗುತ್ತಿದ್ದ  ಕಾರು ಢಿಕ್ಕಿಯಾಗಿತ್ತು.  ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಳಿ ಅಂಕದ ಅಡ್ಡೆಗೆ ಪೊಲೀಸರ ದಾಳಿ: ನಾಲ್ವರು ವಶಕ್ಕೆ
ಕುಂದಾಪುರ:
ಕೋಟೇಶ್ವರದ ಬಾರ್‌ವೊಂದರ ಹಿಂದೆ ನಡೆಯುತ್ತಿದ್ದ ಕೋಳಿಅಂಕದ ಅಡ್ಡೆಗೆ ಶನಿವಾರ ಸಂಜೆ ಕುಂದಾಪುರ ಠಾಣೆಯ ಉಪನಿರೀಕ್ಷಕ ನಾಸಿರ್‌ ಹುಸೇನ್‌ ಹಾಗೂ ಸಿಬಂದಿಗಳು ದಾಳಿ ನಡೆಸಿ ನಾರಾಯಣ, ದಯಾನಂದ, ಶರತ್‌ ಹಾಗೂ ಸಚಿನ್‌ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದಾಳಿ ನಡೆದಾಗ ಸೇರಿದ್ದ ಜನ ಓಡಿಹೋಗಿದ್ದು, ಉಳಿದ ನಾಲ್ವರನ್ನು ಮಾತ್ರ ವಶಕ್ಕೆ ತೆಗೆದುಕೊಳ್ಳಲಾಗಿದೆ . ಕೋಳಿ ಅಂಕದ ಜುಗಾರಿಗೆ ಬಳಿಸಿದ ನಗದು, ಎರಡು ಕೋಳಿಗಳು ಹಾಗೂ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸಿಸಿ ಕೆಮರಾ ಕಂಬಕ್ಕೆ ಕಾರು ಢಿಕ್ಕಿ
ಕಾರ್ಕಳ:
ಸಿಸಿ ಕೆಮರಾ ಕಂಬಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸಿಸಿ ಕೆಮರಾ ಕಂಬ ಬುಡಸಹಿತ ಬಿದ್ದು ಕಾರು ಜಖಂಗೊಂಡ ಘಟನೆ ಶನಿವಾರ ಈದು ಗ್ರಾಮದ ಹೊಸ್ಮಾರು ಚೆಕ್‌ಪೋಸ್ಟ್‌ ಬಳಿ  ಸಂಭವಿಸಿದೆ. ಇಲ್ಲಿ ಪೊಲೀಸ್‌ ಇಲಾಖೆಯಿಂದ ಅಳವಡಿಸಿದ  ಸಿಸಿ ಕೆಮರಾ ಕಂಬಕ್ಕೆ  ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ  ಹಾನಿಯಾಗಿದೆ. ಅಲ್ಲದೇ ಕಾರ್‌ಗೂ ಹಾನಿಯಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಢಿಕ್ಕಿ: ಬೈಕ್‌ ಸವಾರ ಗಾಯ
ಕಾರ್ಕಳ:
ತೂಪಾನ್‌ ವಾಹನವೊಂದಕ್ಕೆ ಬಸ್ಸೊಂದು ಗುದ್ದಿ ಪಕ್ಕದಲ್ಲಿ ಬರುತ್ತಿದ್ದ ಬೈಕ್‌ಗೂ ಢಿಕ್ಕಿ ಹೊಡೆದು ಬೈಕ್‌ ಸವಾರ ಗಾಯಗೊಂಡ ಘಟನೆ  ಮಾಳ ಚೆಕ್‌ಪೋಸ್ಟ್‌ ಬಳಿ ಶನಿವಾರ ಸಂಭವಿಸಿದೆ.

ಕುಮಾರ ಕಲ್ಲಪ್ಪ ಗೋಟರ್‌ ಅವರು ಮಾಳದಿಂದ ಕಾರ್ಕಳ ಕಡೆ ಬರುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬಂದ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಅವರ ತೂಪಾನ್‌ ವಾಹನ ಜಖಂಗೊಂಡಿದ್ದು ಪಕ್ಕದಲ್ಲಿ ಬರುತ್ತಿದ್ದ ಬೈಕ್‌ಗೂ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರನಿಗೂ ಗಾಯಗಳಾಗಿವೆ. ಈ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next