Advertisement

ಕುಂದಾಪುರ: ಅಪಘಾತ; ಮೂವರಿಗೆ ಗಾಯ

06:21 PM Jul 21, 2022 | Team Udayavani |

ಕುಂದಾಪುರ: ಕೋಟೇಶ್ವರ ಗ್ರಾಮದ ಕೋಸ್ಟಲ್‌ ಕ್ರೌನ್‌ ಬಳಿ ಹೆದ್ದಾರಿಯಲ್ಲಿ ಪಾದಚಾರಿ ಬಾಲಕನಿಗೆ ಬೈಕ್‌ ಢಿಕ್ಕಿಯಾಗಿದೆ.

Advertisement

ಸಂದೀಪ್‌ ಶೆಟ್ಟಿ  ಬುಲೆಟ್‌ನಲ್ಲಿ ಸುತೇಶ ಶೆಟ್ಟಿ  ಅವರನ್ನು ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ತೆಕ್ಕಟ್ಟೆ ಕಡೆಗೆ ಹೋಗುತ್ತಿದ್ದಾಗ ಮನೆಯವರ ಜೊತೆ ರಸ್ತೆ ದಾಟಿ ಅಂಚಿಗೆ ತಲುಪುತ್ತಿದ್ದ  ಆಯನ್‌(6)ಗೆ ಢಿಕ್ಕಿ ಹೊಡೆದಿದೆ. ಗಾಯಾಳು ಬಾಲಕನನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿದ ಬಳಿಕ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ  ದಾಖಲಿಸಲಾಗಿದೆ.

ಸಂದೀಪ್‌ಶೆಟ್ಟಿ ಹಾಗೂ ಸುತೇಶ ಶೆಟ್ಟಿ  ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದಾರೆ.   ಸಂಚಾರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next