Advertisement

ಕುಂದಾಪುರ: ಅಪಘಾತ; ಮೂವರಿಗೆ ಗಾಯ

06:08 PM Jul 24, 2022 | Team Udayavani |

ಕುಂದಾಪುರ:  ಕೊಟೇಶ್ವರ ಗ್ರಾಮದ ಶ್ರೀಸಾಯಿ ಟ್ರಾನ್ಸ್‌ಪೋರ್ಟ್‌ ಬಳಿ ಹೆದ್ದಾರಿಯಲ್ಲಿ  ಅರುಣ್‌ ಅವರು  ಬೈಕಿನಲ್ಲಿ ಮಾಲತಿ ಅವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ತೆಕ್ಕಟ್ಟೆ  ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದಿದೆ.

Advertisement

ಹಿಮ್ಮುಖವಾಗಿ ಬರುತ್ತಿದ್ದ ಟ್ರಕ್‌ಗೆ  ಸೂಚನೆ ನೀಡಲು ರಸ್ತೆ  ಬದಿಯಲ್ಲಿ ನಿಂತಿದ್ದ ಇಂದಲ್‌ ಕುಮಾರ್‌ ಚೌಹಣ್‌ ಅವರಿಗೆ ಢಿಕ್ಕಿಯಾಗಿ, ಅರುಣ್‌ ಹಾಗೂ ಮಾಲತಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಹೋಗಿ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಂದಲ್‌ ಕುಮಾರ್‌ ಚೌಹಣ್‌ ಕೋಟೇಶ್ವರ  ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದಾರೆ.

ಸಂಚಾರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next