Advertisement

ಕುಂಬಳೆ: ಸ್ಕೂಟರ್‌ ಗೋಡೆಗೆ ಬಡಿದು ಯುವಕ ಸಾವು

07:57 PM Jun 23, 2022 | Team Udayavani |

ಕುಂಬಳೆ: ಮಂಜೇಶ್ವರ ಹೊಸಂಗಡಿಯ ರೈಲ್ವೇ ಗೇಟಿನ ಬಳಿಯ ನಿವಾಸಿ ದಿನೇಶ್‌ ಕುಮಾರ್‌-ಸುಮತಿ ದಂಪತಿ ಪುತ್ರ ದೀಕ್ಷಿತ್‌ (30) ಅವರ ಸ್ಕೂಟರ್‌ ಖಾಸಗಿ ವ್ಯಕ್ತಿಯ ಆವರಣ ಗೋಡೆಗೆ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ.

Advertisement

ಗುರುವಾರ ಮುಂಜಾನೆ 3 ಗಂಟೆಗೆ ಕಟ್ಟೆ ಬಜಾರಿನಲ್ಲಿ ದೀಕ್ಷಿತ್‌ ಚಲಾಯಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಗೋಡೆಗೆ ಬಡಿದು ದೀಕ್ಷಿತ್‌ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮುಂಜಾನೆ ಬೆಸ್ತರು ಈ ದಾರಿಯಾಗಿ ಮೀನು ಹಿಡಿಯಲು ತೆರಳುತ್ತಿದ್ದಾಗ ಬಿದ್ದವನನ್ನು ಎತ್ತಿ ಆಸ್ಪತ್ರೆಗೆ ಒಯ್ದರೂ, ಚಿಕಿತ್ಸೆ ಫಲಕಾರಿಯಾಗಿಲ್ಲ. ಮಂಗಳೂರಿನಲ್ಲಿ ಚಾಲಕ ವೃತ್ತಿಯಲ್ಲಿರುವ ಈತ ಕೆಲಸ ಮುಗಿಸಿ ಮರಳುವಾಗ ಅಪಘಾತವಾಗಿತ್ತು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.

ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next