Advertisement

ಐಡಿ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ: ನಿರಾಣಿ ಆಪ್ತರಿಗೆ ತರಾಟೆ

12:12 PM Jun 15, 2022 | Team Udayavani |

ಬೆಳಗಾವಿ: ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಈ ವೇಳೆ ಗುರುತಿನ ಕಾರ್ಡ್ ಇಲ್ಲದೇ ಮತ‌ ಎಣಿಕಾ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರ ಆಪ್ತ ಸಹಾಯಕರು ಪ್ರವೇಶಿಸಿದ್ದು, ಅವರನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

Advertisement

ಬೆಳಗಾವಿಯ ಕ್ಲಬ್ ರಸ್ತೆಯ ಜ್ಯೋತಿ ಕಾಲೇಜಿನ ಮತ ಎಣಿಕಾ ಕೇಂದ್ರಕ್ಕೆ ಐಡಿ ಕಾರ್ಡ್ ಇಲ್ಲದೇ ಹಣಮಂತ ನಿರಾಣಿ ಪಿಎ ಸುರೇಶ್ ಬಂದಿದ್ದರು. ಐಡಿ ಕಾರ್ಡ್ ಇಲ್ಲದೇ ಮತ‌ ಎಣಿಕೆ ಕೇಂದ್ರ ಪ್ರವೇಶಿಸಿದ್ದಕ್ಕೆ ಜೆಡಿಎಸ್ ಏಜೆಂಟರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:4 ಸ್ಥಾನದ ಮೇಲ್ಮನೆ ಚುನಾವಣೆ; ಬಿರುಸಿನ ಮತ ಎಣಿಕೆ, ಬಿಜೆಪಿಗೆ ಬಹುಮತದ ನಿರೀಕ್ಷೆ…

ವಿಷಯ ತಿಳಿಯುತ್ತಿದ್ದಂತೆ ನಿರಾಣಿ ಅವರ ಪಿಎಗೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ‌ರಲ್ಲದೆ, ಪೊಲೀಸರಿಗೆ ಆತನನ್ನು ಹೊರಗೆ ಹಾಕುವಂತೆ ಸೂಚನೆ ನೀಡಿದರು. ನಂತರ ಚುನಾವಣಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್‌ ಅವರು ಐಡಿ ಕಾರ್ಡ್ ತಪಾಸಣೆ ಮಾಡದೇ ಏಕೆ ಒಳಗೆ ಬಿಡಲಾಗುತ್ತಿದೆ ಎಂದು ಪೊಲೀಸರಿಗೆ ಚುನಾವಣಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next