Advertisement

ಲಂಚಕ್ಕೆ ಕೈ ಚಾಚಿದ ಇಎಸ್ ಐ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಎಸಿಬಿ ಬಲೆಗೆ

07:05 PM Jun 04, 2022 | Team Udayavani |

ಮಂಗಳೂರು : ರೋಗಿಯೊಬ್ಬರ ಬಳಿ ಲಂಚಕ್ಕೆ ಕೈ ಚಾಚಿದ ಇಎಸ್ ಐ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ ಮಂಗಳೂರು ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

Advertisement

ಮೆಡಿಕಲ್ ಬಿಲ್ ಗಳನ್ನು ಮಂಜೂರು ಮಾಡಲು ಲಂಚ ಕೇಳುತ್ತಿದ್ದ ಪಣಂಬೂರಿನ ಇಎಸ್ ಐ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ವಿಷ್ಣುಮೂರ್ತಿ ಅವರು 2000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಎಸಿಬಿ ಕಚೇರಿಯಲ್ಲಿ ದೂರು ದಾಖಲಾಗಿತ್ತು.

ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಪಣಂಬೂರಿನ ವ್ಯಕ್ತಿ ಯೊಬ್ಬರು ದೂರು ನೀಡಿದ್ದರು.  ದೂರುದಾರರ ಪತ್ನಿ ಬೇಕರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವರು ಇಎಸ್ ಐ ಸದಸ್ಯತ್ವವನ್ನು ಹೊಂದಿದ್ದರು.ಕೆ ಎಂಸಿ ವೈದ್ಯರ ಸಲಹಯಂತೆ ಇಎಸ್ಐ ಡಿಸ್ಪೆನ್ಸರಿಯಿಂದ ಮಾತ್ರೆ, ಇಂಜೆಕ್ಷನ್ ಇತ್ಯಾದಿಗಳನ್ನು ಪಡೆದುಕೊಂಡು ಹೋಗಿ ಮಂಗಳೂರು ಆಸ್ಪತ್ರೆ ಯಲ್ಲಿ ಡಯಲಿಸಿಸ್ ಚಿಕಿತ್ಸೆಯನ್ನು ಪಡೆಯುತ್ತಿದ್ದು ಒಂದು ವೇಳೆ ಇಎಸ್ ಐ  ಡಿಸ್ಪೆನ್ಸರಿಯಿಂದ ಮಾತ್ರೆ ಮತ್ತು ಇಂಜೆಕ್ಷನ್ ಇಲ್ಲದೆ ಇದ್ದಲ್ಲಿ ಖಾಸಗಿ ಮೆಡಿಕಲ್ ನಿಂದ ಖರೀದಿಸಿ ಆ ಬಿಲ್ ನ್ನು ಇಎಸ್ ಐ ಡಿಸ್ಪೆನ್ಸರಿಗೆ ನೀಡಿದ್ದಲ್ಲಿ ಬಿಲ್ಲು ಮಂಜೂರಾತಿ ಆಗಿ ದೂರುದಾರರ ಪತ್ನಿಯ ಖಾತೆಗೆ ಜಮೆಯಾಗುತ್ತಿತ್ತು.

ಶನಿವಾರ ಮಧ್ಯಾಹ್ನ ಲಂಚವನ್ನು ಸ್ವೀಕರಿಸುವ ವೇಳೆಯಲ್ಲಿ ಎ ಸಿ ಬಿ ದಾಳಿ ಮಾಡಿ ಆರೋಪಿ ವಿಷ್ಣುಮೂರ್ತಿ ಯನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಎಸಿಬಿ ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕರಾದ ಸಿ. ಎ ಸೈಮನ್ ಅವರ ಮಾರ್ಗದರ್ಶನ ದಲ್ಲಿ ಎಸಿಬಿ ಪೊಲೀಸ್ ಠಾಣೆ ಉಪಾಧೀಕ್ಷಕರಾದ ಕೆ ಸಿ ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಮತ್ತು ಗುರುರಾಜ್ ಹಾಗೂ ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ ಡಿ ಎ. ರಾಧಾಕೃಷ್ಣ ಕೆ, ಉಮೇಶ್, ವೈಶಾಲಿ, ಗಂಗಣ್ಣ,ಆದರ್ಶ, ರಾಕೇಶ್, ಭರತ್, ಮೋಹನ್ ಸಾಲಿಯಾನ್ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next