Advertisement

ಪಿಡಬ್ಲುಡಿ ಸಹಾಯಕ ಅಭಿಯಂತರ ಮನೆ ಸೇರಿ ಐದು ಕಡೆ ಎಸಿಬಿ ದಾಳಿ

08:54 PM Dec 18, 2020 | mahesh |

ಬೆಳಗಾವಿ: ಲೋಕಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಅಭಿಯಂತರ ಮನೆ ಸೇರಿ ಐದು ಕಡೆಗೆ ಏಕಕಾಲಕ್ಕೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Advertisement

ಸಹಾಯಕ ಅಭಿಯಂತ ಮನೋಜ ಸುರೇಶ ಕವಳೇಕರ ಎಂಬವರ ಮನೆ ಮೇಲೆ ದಾಳಿ ನಡೆಸಿದಾಗ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಪತ್ತೆಯಾಗಿದೆ. ತಮ್ಮ ಆದಾಯ ಮೂಲಕ್ಕಿಂತಲೂ ಹೆಚ್ಚಿನ ಆಸ್ತಿ-ಪಾಸ್ತಿ ಮಾಡಿರುವುದು ದಾಳಿ ವೇಳೆ ಗೊತ್ತಾಗಿದೆ.

ಮನೋಜ ಕವಳೇಕರ ಅವರ ಇಲ್ಲಿಯ ಆಯೋಧ್ಯೆ ನಗರದ ನಿವಾಸಿ, ಸಹೋದರಿ ಜ್ಯೋತಿ ಕವಳೇಕರ ಅವರ ನಿವಾಸ, ಮಹದ್ವಾರ ರಸ್ತೆಯಲ್ಲಿರುವ ಸಹೋದರಿ ರಾಜಶ್ರೀ ಕವಳೇಕರ ಅವರ ಪ್ಲ್ಯಾಟ್, ಮನೋಜ ಅವರ ಕಚೇರಿಯ ಕೊಠಡಿ ಹಾಗೂ ಸಹೋದರಿಯ ಹೆಸರಿನಲ್ಲಿರುವ ಖಾನಾಪುರ ತಾಲೂಕಿನ ಸಂಗರಗಾಳಿ ಗ್ರಾಮದ ಫರ‍್ಮ ಹೌಸ್ ಮೇಲೆ ಎಸಿಬಿ ದಾಳಿ ನಡೆಸಿದೆ.

ಬೆಳಗಾವಿ ಉತ್ತರ ವಲಯದ ಎಸಿಬಿ ತಂಡಗಳು ದಾಳಿ ನಡೆಸಿ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next