Advertisement

ಧೋಳಖೇಡ ಚೆಕ್‌ಪೋಸ್ಟ್‌ ಎಸಿ ಭೇಟಿ

05:58 PM Jan 15, 2022 | Shwetha M |

ಇಂಡಿ: ಕೋವಿಡ್‌-19 ಹಿನ್ನೆಲೆಯಲ್ಲಿ ಕಂದಾಯ ಉಪವಿಬಾಗಾಧಿಕಾರಿ ರಾಹುಲ್‌ ಶಿಂಧೆಯವರು ಮಹಾರಾಷ್ಟ್ರದ ಗಡಿಯ ಭಾಗದ ಧೂಳಖೇಡ ಚೆಕ್‌ ಪೋಸ್ಟ್‌ಗೆ ಗುರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೋವಿಡ್‌ ತಪಾಸಣೆ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಕರ್ತವ್ಯದಲ್ಲಿದ್ದ ಕಂದಾಯ, ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯವರಿಂದ ತಪಾಸಣೆ ಬಗ್ಗೆ ಮಾಹಿತಿ ಮತ್ತು ದಾಖಲೆ ಪಡೆದುಕೊಂಡರು. ಕೋವಿಡ್‌ ನಿಯಮಾವಳಿ ಪ್ರಕಾರ ಪ್ರತಿ ವಾಹನಗಳನ್ನು ತಡೆಸಿ ಪರಿಶೀಲಿಸಿ ಅಗತ್ಯ ದಾಖಲೆ ಪಡೆಯಿರಿ. ಸೂಕ್ತ ದಾಖಲೆ ಇಲ್ಲದವರನ್ನು ವಾಪಸ್‌ ಕಳುಹಿಸಿ. ಇದರಲ್ಲಿ ಯಾವುದೇ ಮುಲಾಜು ಬೇಡ ಎಂದು ತಿಳಿಸಿದರು.

ಅಲ್ಲದೆ ಮಹಾರಾಷ್ಟ್ರದ ದೇವಸ್ಥಾನಗಳಿಗೆ ಹೋಗಿ ಬರುವ ಭಕ್ತರು ಕಡ್ಡಾಯ ಎರಡು ಲಸಿಕೆ ಪಡೆದಿರುವ ಬಗ್ಗೆ ದಾಖಲೆ ಪರಿಶೀಲಿಸಿ. ಆರ್‌ಟಿಪಿಸಿಆರ್‌ ತಪಾಸಣೆ ನಡೆಸುವಂತೆ ಶಿಂಧೆ ಸೂಚಿಸಿದರು.

ಚಡಚಣ ತಹಶೀಲ್ದಾರ್‌ ಸುರೇಶ ಚವಲರ, ಕಂದಾಯ ನಿರೀಕ್ಷಕ ಪಿ.ಜೆ. ಕೊಡಹೊನ್ನ, ಆಶಾ ಕಾರ್ಯಕರ್ತೆಯರು,ಪೊಲೀಸ್‌ ಸಿಬ್ಬಂದಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next