Advertisement

ಗರ್ಭಪಾತವಾಗಲು ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥ: ಮಹಿಳೆ ದಾರುಣ ಸಾವು 

10:20 AM Mar 26, 2017 | Team Udayavani |

ಕೊರಟಗೆರೆ: ಇಲ್ಲಿನ ಕಾಮರಾಜನಹಳ್ಳಿ ಎಂಬಲ್ಲಿ ಗರ್ಭಪಾತವಾಗಲು ಮಾತ್ರೆ ಸೇವಿಸಿ ಗರ್ಭಿಣಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಾರ್ಚ್‌ 24 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

Advertisement

ರಾಧಾಮಣಿ(25) ಎಂಬ ಮಹಿಳೆ 4 ತಿಂಗಳ ಗರ್ಭಿಣಿ ಮೃತ ದುರ್ದೈವಿ . ಮಾರ್ಚ್‌ 23 ರಂದು ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀÌವ್ರ ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರಳೆದಿದ್ದಾರೆ.

ರಾಧಾಮಣಿಗೆ ಈಗಾಗಲೇ 3 ಹೆಣ್ಣು ಮಕ್ಕಳಿದ್ದರು. ನಾಲ್ಕನೆಯದೂ ಹೆಣ್ಣಾಗಬಹುದು ಎಂಬ ಭಯದಲ್ಲಿ ಮಾತ್ರೆ ಸೇವಿಸಿದ್ದರು ಎನ್ನಲಾಗಿದೆ.

ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next