Advertisement

“ಆರೇ’ಅಳಲು: ಇಂದು ವಿಶೇಷ ವಿಚಾರಣೆ

10:04 AM Oct 08, 2019 | Team Udayavani |

ಹೊಸದಿಲ್ಲಿ: ಮುಂಬಯಿನ ಆರೇ ಕಾಲೋನಿ ವ್ಯಾಪ್ತಿಯಲ್ಲಿ ಜಾರಿಗೊಳ್ಳಲಿರುವ ಮೆಟ್ರೋ ಕಾಮಗಾರಿಗಾಗಿ 2,600 ಮರಗಳನ್ನು ಕತ್ತರಿಸುವ ವಿಚಾರ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಮರಗಳನ್ನು ಉಳಿಸುವಂತೆ ಪ್ರತಿಭಟನಾಕಾರರು ಸಿಜೆಐ ರಂಜನ್‌ ಗೊಗೋಯ್‌ರಿಗೆ ಮನವಿ ಸಲ್ಲಿಸಿದ್ದು, ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂದು ಪರಿಗಣಿಸಿ ಸೋಮವಾರ ವಿಚಾರಣೆಗೆತ್ತಿಕೊಳ್ಳಲು ಸಿಜೆಐ ತೀರ್ಮಾನಿಸಿದ್ದಾರೆ. ಇದಕ್ಕಾಗಿ ವಿಶೇಷ ನ್ಯಾಯ ಪೀಠವನ್ನೂ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ, ಮರ ಕತ್ತರಿಸುವುದರ ವಿರುದ್ಧ ಪ್ರತಿಭಟನೆ ನಡೆದಿತ್ತು. 29 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ನಿಯೋಗ ರವಿವಾರ, ಸಿಜೆಐ ನಿವಾಸಕ್ಕೆ ತೆರಳಿ, ಮರ ಕತ್ತರಿಸದಂತೆ ಸಿಜೆಐ ತಮ್ಮ ವಿಶೇಷಾಧಿಕಾರ ಉಪಯೋಗಿಸಿ ಆದೇಶ ಹೊರಡಿಸಬೇಕೆಂದು ಮನವಿ ಸಲ್ಲಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next