Advertisement

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

01:00 AM May 21, 2024 | Team Udayavani |

ಹೊಸದಿಲ್ಲಿ: ಆಮ್‌ ಆದ್ಮಿ ಪಕ್ಷವು ನಿಯಮಗಳನ್ನು ಉಲ್ಲಂ ಸಿ 7 ಕೋಟಿ ರೂ.ಗಳಷ್ಟು ಹಣವನ್ನು ವಿದೇಶ ದಿಂದ ಪಡೆದುಕೊಂಡಿದೆ ಎಂದು ಆರೋಪಿಸಿ ಇ.ಡಿ. ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದೆ. ಪಂಜಾಬ್‌ ಆಪ್‌ ಶಾಸಕ ಸುಖ್‌ಪಾಲ್‌ ಸಿಂಗ್‌ ಖೈರಾ ಆರೋಪಿಯಾಗಿರುವ ಡ್ರಗ್ಸ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಒಂದಷ್ಟು ದಾಖಲೆಗಳು ದೊರೆತಿರುವ ಬಗ್ಗೆ ಇ.ಡಿ. ಪತ್ರ ಬರೆ ದಿದೆ.

Advertisement

ಇ.ಡಿ. ಕಳೆದ ಆಗಸ್ಟ್‌ನಲ್ಲೇ ಆಪ್‌ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್ಸಿಆರ್‌ಎ) ಉಲ್ಲಂ ಸಿರುವ ಮಾಹಿತಿಯನ್ನು ಗೃಹ ಸಚಿವಾಲ ಯಕ್ಕೆ ಸಲ್ಲಿಸಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆಪ್‌ ನಾಯಕಿ ಅತಿಶಿ ಇದು ಬಿಜೆಪಿ ಪಿತೂರಿ. ಅಬಕಾರಿ, ಸ್ವಾತಿ ಪ್ರಕರಣಗಳಲ್ಲಿ ಸೋತ ಬಿಜೆಪಿ ಈಗ ವಿದೇಶಿ ಹಣವನ್ನು ಮುಂದಿಟ್ಟಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next