Advertisement

ಭಾಲ್ಕಿಯಲ್ಲಿ ಆಮ್‌ ಆದ್ಮಿ ನಿರಶನ

03:01 PM Jun 23, 2022 | Team Udayavani |

ಭಾಲ್ಕಿ: ಕೇಂದ್ರ ಸರ್ಕಾರದ ಅಗ್ನಿಪಥ್‌ ಸೇನಾ ನೇಮಕಾತಿಯ ಯೋಜನೆ ಖಂಡಿಸಿ ತಾಲೂಕು ಆಮ್‌ ಆದ್ಮಿ ಪಕ್ಷದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ನಂತರ ಮಾತನಾಡಿದ ಆಮ್‌ ಆದ್ಮಿ ಪಕ್ಷದ ಪ್ರಮುಖರು, ದೇಶದ ಯುವಕರು ಕೇವಲ ನಾಲ್ಕು ವರ್ಷ ಸೇವೆ ಮಾಡಿ ನಂತರ ನಿರುದ್ಯೋಗ ಸಮಸ್ಯೆಗೆ ದಾರಿ ಮಾಡಿಕೊಡುತ್ತಿರುವ ಅಗ್ನಿಪಥ್‌ ಯೋಜನೆಯು ದೇಶದ ಯುವಕರಿಗೆ ಮಾರಕವಾಗಿದೆ. ತಕ್ಷಣವೇ ಈ ಯೋಜನೆ ಹಿಂಪಡೆದು, ದೇಶದ ಯುಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಮ್‌ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ತುಕಾರಾಮ ಹಜಾರೆ, ಪ್ರಮುಖರಾದ ಭಾಗ್ಯಶ್ರೀ ಹೋಳಕರ, ಮಹೇಂದ್ರ ಕಾಂಬಳೆ, ಪ್ರಬುಧ ಭಾರತ ಸಿಂಧೆ, ಸತೀಶಕುಮಾರ ಹೊನ್ನಾಡೆ, ಮಹೇಶ ಗಂವಂಡೆ, ಸಿದ್ದು ಕೊರಾಳೆ, ಸಯಾದ ಅಲ್ಲಿಯುದಿನ್‌, ಸಂಜೀವ ರತ್ನಾಕರ, ಪ್ರದೀಪ ಬಿರಾದಾರ, ಲೋಕೇಶ ಹಜಾರೆ, ಮಿಲಿಂದ ಹಜಾರೆ, ಸಂಜೀವ ಹಜಾರೆ, ರಾಜೇಶ್ವರಿ ಕುಂಬಾರ, ಉದ್ಧವ ಮೇತ್ರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next