Advertisement

ವಿವಾಹ ನಿಶ್ಚಯವಾಗಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ, ಯುವತಿ ಆತ್ಮಹತ್ಯೆಗೆ ಶರಣು

08:58 PM Mar 12, 2024 | Team Udayavani |

ಹುಣಸೂರು; ವಿವಾಹ ನಿಶ್ಚಯವಾಗಿದ್ದ ಯುವತಿಯನ್ನು ಮದುವೆಗೆ ನಾಲ್ಕು ದಿನ ಮುನ್ನಾ ಅಪಹರಿಸಿ, ಪುಸಲಾಯಿಸಿ ಅತ್ಯಾಚಾರವೆಸಗಿ ಬಿಟ್ಟು ಹೋಗಿದ್ದರಿಂದ ಬೇಸತ್ತ ಯುವತಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಶ್ಯಾನುಬೋಗನಹಳ್ಳಿಯಲ್ಲಿ ನಡೆದಿದೆ.

Advertisement

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಶ್ಯಾನುಬೋಗನಹಳ್ಳಿಯ ಮಹೇಶ್-ಶಾಂತ ದಂಪತಿಪುತ್ರಿ ರಂಜಿತಾ(19)ಆತ್ಮಹತ್ಯೆಗೆ ಶರಣಾದ ಯುವತಿ.

ಅದೇ ಗ್ರಾಮದ ವಿವಾಹಿತ ವೇಣುಗೋಪಾಲ್ ಮತ್ತು ಈತನಿಗೆ ಸಹಕರಿಸಿದ ಮಹೇಶ್ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:
ರಂಜಿತಾಳಿಗೆ 2024 ರ ಫೆ.18ಕ್ಕೆ ಮದುವೆ ನಿಶ್ಚಯವಾಗಿತ್ತು, ಆದರೆ ಆರೋಪಿ ಅದೇ ಗ್ರಾಮದ ಎರಡು ಮಕ್ಕಳ ತಂದೆ ವೇಣುಗೋಪಾಲ್ ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ರಂಜಿತಾಳನ್ನ ಮದುವೆ ಆಗುವುದಾಗಿ ನಂಬಿಸಿ ಕೇರಳಾಕ್ಕೆ ತನ್ನ ಬೊಲೆರೋ ವಾಹನದಲ್ಲಿ ಕರೆದೊಯ್ದು ಅಲ್ಲಿಂದ ರಾತ್ರಿ ಮತ್ತೆ ವಾಪಸ್ ಗುಂಡ್ಲುಪೇಟೆಗೆ ಕರೆತಂದು ಪುಸಲಾಯಿಸಿ ಅತ್ಯಾಚಾರವೆಸಗಿದ್ದಾನೆ. ನಂತರ ಕೊಳ್ಳೆಗಾಲಕ್ಕೆ ಕರೆದೊಯ್ದು, ನಂತರ ನಂಜನಗೂಡು, ಗುಂಡ್ಲುಪೇಟೆ, ಮೈಸೂರು ಸುತ್ತಾಡಿಸಿ ಕೊನೆಗೆ ನಂಜನಗೂಡು ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಹೋಗುವಂತೆ ತಿಳಿಸಿ ಪರಾರಿಯಾಗಿದ್ದು, ಈ ಎಲ್ಲ ಘಟನೆಗಳಿಗೆ ಮಹೇಶ್ ಎಂಬಾತ ಸಹ ಕುಮ್ಮಕ್ಕು ನೀಡಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ.

ಘಟನೆಯಿಂದ ನೊಂದ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ, ಫೆಬ್ರವರಿ 21ರಂದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ರಂಜಿತಾ ಇಬ್ಬರ ವಿರುದ್ದ ದೂರು ದಾಖಲಿಸಿದ್ದಳು, ಅಂದಿನಿಂದ ಆರೋಪಿ ವೇಣುಗೋಪಾಲ್ ತಲೆಮರೆಸಿಕೊಂಡಿದ್ದ. ಶಕ್ತಿಧಾಮದಲ್ಲಿದ್ದ ಮಗಳನ್ನು ಶಿವರಾತ್ರಿ ಹಬ್ಬಕ್ಕಾಗಿ ಪೋಷಕರು ಕರೆದುಕೊಂಡು ಬಂದಿದ್ದರು. ಈ ನಡುವೆ ಮಂಗಳವಾರ ಬೆಳಗ್ಗೆ ಯುವತಿಯ ತಂದೆ ಹಾಗೂ ಆರೋಪಿ ಮಹೇಶ್ ನಡುವೆ ಗಲಾಟೆಯಾಗಿದ್ದು, ಇದರಿಂದ ಬೇಸತ್ತ ರಂಜಿತಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯನ್ನು ಕೆ.ಆರ್.ನಗರ ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ ಸಾವನ್ನಪ್ಪಿದ್ದಳು, ಈ ನಡುವೆ ಅವರ ಕುಟುಂಬದವರು ಆರೋಪಿಗಳನ್ನು ಬಂಧಿಸದ ಹೊರತು ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡಿರಲಿಲ್ಲ. ಕೊನೆಗೆ ಬಿಳಿಕೆರೆ ಠಾಣೆ ಇನ್ಸ್ ಪೆಕ್ಟರ್ ಲೋಲಾಕ್ಷಿಯವರು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಮೇರೆಗೆ ಸಂಜೆ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.

Advertisement

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: ಜನರಿಗೆ ಸರ್ಕಾರ ನೀಡುತ್ತಿರುವ 5 ಗ್ಯಾರಂಟಿಗಳೇ ನಮ್ಮ ಗೆಲುವಿನ ಶ್ರೀರಕ್ಷೆ: ಚಂದ್ರಶೇಖರ್‌ಗೌಡ

Advertisement

Udayavani is now on Telegram. Click here to join our channel and stay updated with the latest news.

Next