Advertisement

Thirthahalli ತುಂಗಾ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು

09:27 PM May 19, 2023 | Team Udayavani |

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊರಬೈಲು ಬುಕ್ಲಾಪುರ ಸಮೀಪ ಗುರುವಾರ ಮಧ್ಯಾಹ್ನನಡೆದಿದ್ದು ಶುಕ್ರವಾರ ಶವ ಪತ್ತೆಯಾಗಿದೆ.

Advertisement

ಹೊರಬೈಲಿನ ಮರ ಕೆಲಸ ಮಾಡುತ್ತಿರುವ ವೆಂಕಟೇಶ ಆಚಾರ್ಯ ಅವರ ಪುತ್ರ ಮಾಧವ್ ( 26) ಈಜಲು ಹೋದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. 4 ಮಂದಿ ಸ್ನೇಹಿತರು ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ದಿನಗಳಿಂದ ನಿರಂತರವಾಗಿ ಅಗ್ನಿ ಶಾಮಕ ದಳದ ಸಿಬಂದಿಗಳು ನದಿಯಲ್ಲಿ ಶೋಧ ನಡೆಸಿದರೂ ಮೃತ ದೇಹ ಪತ್ತೆ ಯಾಗಲಿಲ್ಲ, ನಂತರ ಬುಕ್ಲಾಪುರದ ಬಳಿ ಶವ ಪತ್ತೆಯಾಗಿದ್ದು, ಶವವನ್ನು ಕುರುವಳ್ಳಿಯ ಸಾಮಾಜಿಕ ಸೇವಕ, ನೂರಾರು ಶವವನ್ನು ನದಿಯಿಂದ ಮೇಲಕ್ಕೆ ಎತ್ತಿರುವಂತಹ ಪ್ರಮೋದ್ ಪೂಜಾರಿ ಅವರು ಮೇಲೆತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next