Advertisement

Kollur; ಯುವಕ ನಾಪತ್ತೆ; ದೂರು ದಾಖಲು

06:36 PM Jul 24, 2023 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯ ನಿವಾಸಿ ಮಂಜ ಅವರ ಪುತ್ರ ಸುರೇಶ(28) ಅವರು ನಾಪತ್ತೆಯಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಆತ ಜು.22 ರಂದು ರಾತ್ರಿ 8 ಗಂಟೆಗೆ ಮನೆಮಂದಿಯೊಡನೆ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಜು.23 ರಂದು ಬೆಳಗ್ಗೆ 6 ಗಂಟೆಗೆ ಮನೆಯವರು ಎದ್ದು ನೋಡುವಾಗ ಸುರೇಶ ಕಾಣೆಯಾಗಿದ್ದರು.

ಸಮೀಪದ ಕಾಡು, ಹೊಳೆ ಇನ್ನಿತರ ಪ್ರದೇಶದಲ್ಲಿ ಹುಡುಕಾಡಿದ ಸಂಬಂಧಿಕರು, ನಾಪತ್ತೆಯಾದ ಬಗ್ಗೆ ಕೊಲ್ಲೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next