Advertisement

ನಿರ್ದೇಶಕರು-ನಿರ್ಮಾಪಕರ ಬಗ್ಗೆ ಅಣ್ಣಾವ್ರು ನುಡಿದ ಮುತ್ತಿನಂತ ಮಾತುಗಳ ವಿಡಿಯೋ ವೈರಲ್

05:34 PM Jul 21, 2021 | Team Udayavani |

ಬೆಂಗಳೂರು:ವರನಟ ಡಾ.ರಾಜಕುಮಾರ್ ಅವರು ಅಭಿನಯದಿಂದ ಎಷ್ಟು ಹೆಸರು ಮಾಡಿದ್ದರೋ ಅಷ್ಟೇ ಹೆಸರು ಅವರ ವ್ಯಕ್ತಿತ್ವದಿಂದ ಗಳಿಸಿಕೊಂಡಿದ್ದರು.

Advertisement

ಬದುಕಿನುದ್ದಕ್ಕೂ ಆದರ್ಶ-ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದ ರಾಜಕುಮಾರ್ ಎಂದೂ ಕೂಡ ನಯ-ವಿನಯ ಮರೆಯಲಿಲ್ಲ. ತಮಗಿಂತ ಚಿಕ್ಕವರಿಗೂ ಗೌರವ ನೀಡುತ್ತಿದ್ದ ನಟಸಾರ್ವಭೌಮನ ಸರಳತೆ ಎಲ್ಲರಿಗೂ ಮಾದರಿಯಾಗಬೇಕು ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಇದೀಗ ರಾಜಕುಮಾರ್ ಅವರು ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರ ಕುರಿತು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ ?  

ನಿಮಗಿಂತ ವಯಸ್ಸಿನಲ್ಲಿ ಕಿರಿಯರು ಉದಾಹರಣೆಗೆ ಶಂಕರ್ ನಾಗ್ ಹಾಗೂ ನಾಗಾಭರಣ ಅವರಂತವರು ನಿಮಗೆ ನಿರ್ದೇಶನ ಮಾಡುತ್ತಿದ್ದ ವೇಳೆ ನಿಮಗೆ ಏನು ಎನ್ನಿಸುತ್ತದೆ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ್ದ ರಾಜಕುಮಾರ್, ಅವರಲ್ಲಿ ಜ್ಞಾನ ಇರುವಾಗ ಅವರು ಕಿರಿಯರು ಹೇಗೆ ಆಗುತ್ತಾರೆ ? ಅವರು ಹಿರಿಯರಾಗಿದ್ದರಿಂದಲೆ ಆ ಜಾಗಕ್ಕೆ ಬಂದಿದ್ದು. ನಿರ್ದೇಶಕ ಎನ್ನುವನು ಸೂತ್ರದಾರ. ಪ್ರತಿಯೊಂದು ಸೂತ್ರ ಅವರ ಕೈಯಲ್ಲೆ ಇರುವುದು ಎಂದಿದ್ದಾರೆ.

ನಿರ್ಮಾಪಕರ ಬಗ್ಗೆ ರಾಜ್ ಮಾತು :

Advertisement

ಇನ್ನು ಸಂದರ್ಶನದಲ್ಲಿ ನಿರ್ಮಾಪಕರ ಬಗ್ಗೆಯೂ ಗೌರವದ ನುಡಿಗಳನ್ನಾಡಿರುವ ರಾಜಕುಮಾರ್ ಅವರು ‘ಇವತ್ತಿಗೂ ನಮಗೆ ನಾಟಕ ಕಂಪನಿಯಲ್ಲಿ ಇದ್ದ ಅಭ್ಯಾಸ ಆಗಿದ್ದರಿಂದ ಒಬ್ಬ ಯಜಮಾನ ಆದವನಿಗೆ ಏನೂ ಸ್ಥಾನ ಕೊಟ್ಟಿದ್ದೇವೋ, ಅದನ್ನು ನಿರ್ಮಾಪಕರಿಗೂ ಅದೇ ಗೌರವ ಕೊಡುತ್ತೇವೆ. ಕಷ್ಟದಲ್ಲಿದ್ದರೂ ಕೂಡ ಎಷ್ಟೋ ಜನ ನಿರ್ಮಾಪಕರಾಗಿ ನಮಗೆ ಅನ್ನ ಹಾಕಿದ್ದಾರೆ. ನಮಗೆ ಏನೇ ಮಾಡಿದರೂ ಕೂಡ ಯಜಮಾನ ಅನ್ನೋದು ಒಳಗಡೆಯಿಂದ ಅಳಿಸೋಕೆ ಆಗುವುದಿಲ್ಲ. ಅವನು ನಮಗೆ ಅನ್ನ ಕೊಟ್ಟ ದಣಿ, ಇದು ನಮಗೆ ಚಿಕ್ಕಂದಿನಿಂದ ಬಂದ ಅಭ್ಯಾಸ’ ಎಂದು ಹೇಳಿದ್ದರು.

ಈಗೇಕೆ ವೈರಲ್ ?

ನಿರ್ಮಾಪಕರು ಹಾಗೂ ನಿರ್ದೇಶಕರ ಬಗ್ಗೆ ಡಾ.ರಾಜಕುಮಾರ್ ಅವರು ನುಡಿದಿರುವ ಮುತ್ತಿನಂತಹ ಮಾತುಗಳ ವಿಡಿಯೋ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿರುವುದಕ್ಕೆ ಕಾರಣ ದರ್ಶನ್ ಅವರ ಮ್ಯಾಟರ್. ಇತ್ತೀಚಿಗೆ ಮಾಧ್ಯಮಗಳ ಎದುರು ಮಾತನಾಡುತ್ತಿದ್ದ ವೇಳೆ ದರ್ಶನ್ ಅವರು ನಿರ್ದೇಶಕ ಪ್ರೇಮ್ ಅವರಿಗೆ ಪುಡುಂಗ ಎಂದು ಕರೆದಿದ್ದರು. ಇದಕ್ಕೆ ಪ್ರೇಮ್ ಸೇರಿದಂತೆ ಸಾಕಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಪ್ರೇಮ್ ಅವರು ದರ್ಶನ್ ಅವರ ಕರಿಯಾ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

Advertisement

Udayavani is now on Telegram. Click here to join our channel and stay updated with the latest news.

Next