ರಾಮನಗರ: ಮಾವಿನಕಾಯಿ ತುಂಬಿದ್ದ ವಾಹನವೊಂದು ಪಲ್ಟಿಯಾದ ಘಟನೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ನ ಕದಂಬ ಹೋಟೆಲ್ನ ಬಳಿ ಶುಕ್ರವಾರ ನಡೆದಿದೆ.
ಕೇರಳಕ್ಕೆ ಮಾವಿನ ಕಾಯಿಯನ್ನು ತುಂಬಿಕೊಂಡು ಹೋಗುತ್ತಿದ್ದ ಬೋಲೇರೋ ಪಿಕಪ್ ವಾಹನ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣವನ್ನು ತಪ್ಪಿ ಡಿವೈಡರ್ ಗೆ ಹೋಗಿ ಗುದ್ದಿದೆ. ಡಿವೈಡರ್ ಗೆ ಗುದ್ದಿದ ಪರಿಣಾಮ ಹಾಕಿದ್ದ ತಂತಿ ಬೇಲಿ ತುಂಡಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ಸಂಚಾರಿ ಪೊಲೀಸರು ವಾಹನಗಳು ಓಡಾಟ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ನಂತರ ಮಾವಿನ ಕಾಯಿಗಳನ್ನು ಬೇರೆ ಕಡೆ ಶಿಫ್ಟ್ ಮಾಡಿಸಿದ್ದಾರೆ.
Related Articles
ಈ ಸಂಬಂಧ ಚೆನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.