Advertisement

Thekkatte: ಅಪಾಯಕಾರಿ ಹೊಂಡದಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಡುಕೋಣ ರಕ್ಷಿಸಿದ ಯುವಕರ ತಂಡ

03:32 PM Dec 22, 2023 | Team Udayavani |

ತೆಕ್ಕಟ್ಟೆ: ಕಾಡಕೋಣವೊಂದು ಮೇವು ಅರಸಿ ತೆಕ್ಕಟ್ಟೆ ಮೇಲ್ತಾರುಮನೆ ಪರಿಸರದಲ್ಲಿ ಕಂಡುಬಂದಿದ್ದು, ಇಲ್ಲಿನ ಸಮೀಪದಲ್ಲಿರುವ ಆವೆಮಣ್ಣಿನ‌ ಗಣಿಗಾರಿಕೆಯಿಂದಾದ ಸೃಷ್ಟಿಯಾಗಿರುವ ಅಪಾಯಕಾರಿ ಹೊಂಡದಲ್ಲಿ ನೀರು ಹಾಗೂ ಬೆಳೆದು ನಿಂತಿರುವ ಗಿಡಗಂಟಿಗಳ ನಡುವೆ ಸಿಲುಕಿ ಜೀವನ್ಮರಣದ ನಡುವೆ ಒದಾಡುತ್ತಿರುವುದು ಕಂಡುಬಂತು.

Advertisement

ಮಧ್ಯಾಹ್ನ ಸರಿ‌ಸುಮಾರು 12.20 ಗಂಟೆಗೆ ಕಾಡಕೋಣ ಒದಾಡುತ್ತಿರುವುದನ್ನು ನೋಡಿದ ಸ್ಥಳೀಯ ಯುವಕರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಅಪಾಯದಲ್ಲಿರುವ ಕಾಡುಕೋಣದ ರಕ್ಷಣಾ ಕಾರ್ಯಕ್ಕೆ ಮುಂದಾದರು.

ಒಂದೆಡೆಯಿಂದ ಕಾಡುಕೋಣವನ್ನು ಗುಂಪಾಗಿ‌ ನಿಂತು ಏರು ಧ್ವನಿಯಿಂದ  ಕೂಗಾಡಲು ಆರಂಭಿಸಿದಾಗ ಒಮ್ಮೆಲೆ ಹೊಂಡದಲ್ಲಿದ್ದ ಕಾಡುಕೋಣ ಜಿಗಿಯಲು ಆರಂಬಿಸಿತು. ಶ್ರೀನಾಥ್ ಶೆಟ್ಟಿ‌ಮೇಲ್ತಾರುಮನೆ, ಕಿರಣ್ ಪೂಜಾರಿ ದರ್ಶನ್, ನಿರಂಜನ್, ಸುರೇಂದ್ರ ಉಳ್ತೂರು ಸಹಕರಿಸಿದರು.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next