Advertisement

ಮಡಿಕೇರಿ ಮೂಲದ ವಿದ್ಯಾರ್ಥಿ ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

11:42 PM Jan 04, 2024 | Team Udayavani |

ಮಡಿಕೇರಿ: ಕೊಡಗು ಮೂಲದ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭವಾನಿ ನಗರದಲ್ಲಿ ಸಂಭವಿಸಿದೆ.
ಬೆಂಗಳೂರಿನಲ್ಲಿ ಭದ್ರತಾ ಸಿಬಂದಿಯಾಗಿರುವ ಕೊಡಗು ಮೂಲದ ತಮ್ಮಯ್ಯ ಅವರ ಪುತ್ರ, ಬಿಇ ಪ್ರಥಮ ವರ್ಷದ ವಿಶು ಉತ್ತಪ್ಪ (19) ಸಾವನ್ನಪ್ಪಿದವರು.

Advertisement

ತಮ್ಮಯ್ಯ ಅಂಗಡಿಗೆಂದು ಹೋಗಿದ್ದಾಗ ಮನೆಯಲ್ಲಿದ್ದ ತಂದೆಯ ಗನ್‌ನಿಂದ ವಿಶು ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಬಳಿಕ ತಂದೆಗೆ ಕರೆ ಮಾಡಿ ನಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಗಾಬರಿಗೊಂಡ ತಮ್ಮಯ್ಯ ಮನೆಗೆ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶುವನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ

ತಮ್ಮಯ್ಯ ಅವರ ಕುಟುಂಬ 15 ವರ್ಷಗಳಿಂದ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಭವಾನಿ ನಗರದಲ್ಲಿ ವಾಸವಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next