Advertisement

ಕೊಕ್ಕಡ ಸಮೀಪ ಸರಣಿ ಅಪಘಾತ: ಹಲವರಿಗೆ ಗಾಯ

02:22 AM May 07, 2019 | Team Udayavani |

ನೆಲ್ಯಾಡಿ: ಕೊಕ್ಕಡದಿಂದ ಧರ್ಮಸ್ಥಳಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ 2 ಕಾರುಗಳು ಮುಖಾಮುಖೀ ಢಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ. ಜತೆಗೆ ಅಪಘಾತದ ಗಾಯಾಳುಗಳನ್ನು ಕೊಂಡೊ ಯ್ಯಲೆಂದು ಬಂದಿದ್ದ ಆ್ಯಂಬುಲೆನ್ಸ್‌ ವಾಹನವೊಂದು ಸೌತಡ್ಕ ಕ್ರಾಸ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾದ ಘಟನೆ ಸೋಮವಾರ ಪೂರ್ವಾಹ್ನ ಸಂಭವಿಸಿದೆ.

Advertisement

ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್‌ ಕಾರು ಮತ್ತು ಆಲಂಕಾರಿನಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಸಿಲರಿಯೋ ಕಾರು ಕಾಪಿನಬಾಗಿಲು – ಪಾರ್ಪಿಕಲ್‌ ನಡುವೆ ಮುಖಾಮುಖೀ ಢಿಕ್ಕಿಯಾಗಿದೆ. ಸಿಲರಿಯೋ ಕಾರಿನಲ್ಲಿದ್ದ ಯಮುನಾ (40), ಮುತ್ತಪ್ಪ (45), ಮೋಹಿನಿ (42), ಮೋಕ್ಷಿ (17), ಧನ್ಯಾ (16) ಗಾಯಗೊಂಡಿದ್ದಾರೆ. ಇವರ ಪೈಕಿ ಧನ್ಯಾಳಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಮೂಲದ ಸ್ವಿಫ್ಟ್ ಕಾರಿನಲ್ಲಿದ್ದ ಶಿವಕಾಳಯ್ಯ (60), ನಾಗೇಶ್‌ (30), ವಂಗನೂರಮ್ಮ (45), ಲಕ್ಕನೂರಮ್ಮ (65), ಸುಮಾ (30), ಮಾನಸಾ (12),ರಶ್ಮಿತಾ (2), ದಿಲೀಪ್‌ (8 ತಿಂಗಳು) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯು ತ್ತಿ ದ್ದಾರೆ.

ಆ್ಯಂಬುಲೆನ್ಸ್‌ ಚರಂಡಿಗೆ
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕೆಲವು ಆ್ಯಂಬುಲೆನ್ಸ್‌ ಗಳು ಬಂದಿದ್ದವು. ಈ ಪೈಕಿ ನೆಲ್ಯಾಡಿ ಮೂಲದ ಆ್ಯಂಬುಲೆನ್ಸ್‌ ಸ್ಥಳಕ್ಕೆ ತಲುಪುವ ಮೊದಲೇ ಗಾಯಾಳುಳೆಲ್ಲ ರನ್ನೂ ಸ್ಥಳಾಂತರಿಸಲಾಗಿತ್ತು. ಈ ಆ್ಯಂಬುಲೆನ್ಸ್‌ ವಾಪಸ್‌ ಹೋಗುತ್ತಿದ್ದಾಗ ಸೌತಡ್ಕ ದೇವಸ್ಥಾನದ ದ್ವಾರದ ಸಮೀಪ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನ ಚರಂಡಿಗೆ ಪಲ್ಟಿಯಾಗಿದೆ. ಬೈಕ್‌ ಸವಾರರನ್ನು ತಪ್ಪಿಸಲು ಹೋಗಿ ಆ್ಯಂಬುಲೆನ್ಸ್‌ ಚರಂಡಿಗೆ ಬಿದ್ದಿದೆ ಎನ್ನಲಾಗಿದೆ.ಈ ಸಂದರ್ಭ ರಸ್ತೆ ಬದಿ ಯಲ್ಲಿ ನಿಂತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿದೆ.

ನೆಲ್ಯಾಡಿ ಹೊರಠಾಣಾ ಮತ್ತು ಹೈವೇ ಪಟ್ರೋಲ್‌ ಸಿಬಂದಿ ಸೂಕ್ತ ಕ್ರಮ ಕೈಗೊಂಡರು. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next