Advertisement

ವಾಹನ ಜಪ್ತಿಗೆ ರಿಕವರಿ ಏಜೆಂಟ್‌ ಬಳಸುವಂತಿಲ್ಲ

09:53 PM May 25, 2023 | Team Udayavani |

ಪಾಟ್ನಾ: ತಿಂಗಳ ಕಂತಿನಲ್ಲಿ ಬ್ಯಾಂಕ್‌ಗಳಿಂದ ವಾಹನ ಸಾಲ ಪಡೆದ ಗ್ರಾಹಕರು ಸರಿಯಾಗಿ ಕಂತಿನ ಹಣ ಪಾವತಿಸಿಲ್ಲವೆಂದು ರಿಕವರಿ ಏಜೆಂಟ್‌ಗಳ ಮೂಲಕ ಅವರ ವಾಹನ, ಕಾರುಗಳನ್ನು ಜಪ್ತಿಗೊಳಿಸುವ ಹಕ್ಕು ಬ್ಯಾಂಕ್‌ಗಳಿಗೆ ಅಥವಾ ಯಾವುದೇ ಹಣಕಾಸು ಸಂಸ್ಥೆಗೆ ಇಲ್ಲ.

Advertisement

ಇದು ಕಾನೂನು ಬಾಹಿರವೆಂದು ಪಾಟ್ನಾ ಹೈಕೋರ್ಟ್‌ ಹೇಳಿದೆ. ಅಲ್ಲದೇ, ಈ ರೀತಿ ವರ್ತಿಸಿದ್ದ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳಿಗೆ ತಲಾ 50,000 ರೂ.ಗಳ ದಂಡವನ್ನೂ ವಿಧಿಸಿದೆ. ಹಣಕಾಸು ಸಂಸ್ಥೆಗಳ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ರಾಜೀವ್‌ ರಂಜನ್‌ ಪ್ರಸಾದ್‌ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗ್ರಾಹಕರ ವಾಹನ ಜಪ್ತಿಗೆ ರಿಕವರಿ ಏಜೆಂಟ್‌ಗಳನ್ನು ಬಳಸುವುದು ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸುಸ್ಥಿ ಸಾಲ ಮರುಪಾವತಿಗಾಗಿಯೇ ಇರುವ ನಿಯಮಗಳ ಅನ್ವಯವಷ್ಟೇ ಬ್ಯಾಂಕ್‌ಗಳು ವಸೂಲಾತಿ ನಡೆಸಬೇಕು ಎಂದಿದ್ದಾರೆ. ಜತೆಗೆ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳ ಜತಗೆ ಈ ರೀತಿ ವ್ಯವಹರಿಸುವ ರಿಕವರಿ ಏಜೆಂಟ್‌ಗಳ ವಿರುದ್ಧವೂ ಕೇಸು ದಾಖಲಿಸಲು ನ್ಯಾಯಪೀಠ ಪೊಲೀಸರಿಗೆ ಆದೇಶಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next