Advertisement

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

04:25 PM Apr 01, 2023 | Team Udayavani |

ಶಿರ್ವ: ಅಳಿವಿನಂಚಿನಲ್ಲಿರುವ ತುಳುನಾಡಿನ ಕೊರಗ ಭಾಷೆಯಲ್ಲಿ ತನ್ನ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ತನ್ನ ನೆಂಟರಿಷ್ಟರಿಗೆ ಹಂಚುವ ಮೂಲಕ ರಮೇಶ್‌ ಮಂಚಕಲ್‌ ಅವರು ತಮ್ಮ ಜನಾಂಗದ ಭಾಷಾಭಿಮಾನ ಮೆರೆದಿದ್ದಾರೆ.

Advertisement

ಮೂಲತಃ ಶಿರ್ವಕೋಡು ಪಂಜಿಮಾರಿನವರಾದ ರಮೇಶ್‌ ಅವರು ವಾಮಂಜೂರಿನಲ್ಲಿ ನೆಲೆಸಿದ್ದು, ಎ. 2 ರಂದು ತನ್ನ ಪುತ್ರ ಲೇಖರಾಜ್‌ ಗೆ ಕೋಡಿಕಲ್‌ ನ ವೇದಾವತಿಯೊಂದಿಗೆ ಮಂಗಳೂರು ಉರ್ವಸ್ಟೋರ್‌ ನ ಡಾ|ಬಿ.ಆರ್‌. ಆಂಬೇಡ್ಕರ್‌ ಭವನದಲ್ಲಿ ನಡೆಯುವ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲಿ ಮುದ್ರಿಸಿದ್ದು, ಗಮನ ಸೆಳೆದಿದೆ.

ಇದನ್ನೂ ಓದಿ:ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ: ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ ಡಿಕೆ

ಅಳಿವಿನಂಚಿನಲ್ಲಿರುವ ಭಾಷೆಯನ್ನು ಉಳಿಸಲು ಇದೊಂದು ಪ್ರಾಮಾಣಿಕ ಪ್ರಯತ್ನವಾಗಿದ್ದು, ಮುಂದಿನ ಪೀಳಿಗೆಗೆ ಮಾದರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next