Advertisement

ಬೈಕ್‌ಗೆ ಅಡ್ಡ ಬಂದ ನಾಯಿಯ ಪ್ರಾಣ ಉಳಿಸಲು ಹೋಗಿ ಅರ್ಚಕ ದುರ್ಮರಣ

08:06 PM Oct 14, 2022 | Team Udayavani |

ಕುಣಿಗಲ್ : ರಸ್ತೆಗೆ ಅಡ್ಡ ಬಂದ ನಾಯಿ ಪ್ರಾಣ ಉಳಿಸಲು ಹೋಗಿ, ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ, ಬೈಕ್ ರಸ್ತೆಯ ವಿಭಜಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಅವಘಡ ತಾಲೂಕಿನ ಕೊತ್ತಗೆರೆ ಹೋಬಳಿ ರಾಜ್ಯ ಹೆದ್ದಾರಿ 33ರ ಟಿ.ಎಂ ರಸ್ತೆ ಚಿಗಣಿಪಾಳ್ಯ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದೆ.

Advertisement

ತಾಲೂಕಿನ ಕಾಮನಹಳ್ಳಿ ಗ್ರಾಮದ ನಿವಾಸಿ, ಅರ್ಚಕ ನಟರಾಜ್ ದೀಕ್ಷಿತ್ (55) ಮೃತ ದುರ್ದೈವಿ, ಮಗ ಶ್ರೀಕಂಠ ದೀಕ್ಷಿತ್‌ಗೆ ಸಣ್ಣ ಪುಟ್ಟಗಾಯವಾಗಿದೆ.   ಕುಣಿಗಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಘಟನೆ ಸಂಬವಿಸಿದೆ. ಅರ್ಚಕ ನಟರಾಜ್ ದೀಕ್ಷಿತ್ ಹಾಗೂ ಮಗ ಶ್ರೀಕಂಠದೀಕ್ಷಿತ್  ಕೆಲಸದ ನಿಮಿತ ದ್ವಿಚಕ್ರ ವಾಹನದಲ್ಲಿ ಕುಣಿಗಲ್ ಪಟ್ಟಣಕ್ಕೆ ಬರುತ್ತಿರಬೇಕಾದರೆ, ಚಿಗಣಿಪಾಳ್ಯ ಗ್ರಾಮದ ಬಸ್ ನಿಲ್ದಾಣ ಸಮೀಪ ದ್ವಿಚಕ್ರ ವಾಹನಕ್ಕೆ  ನಾಯಿ ಅಡ್ಡ ಬಂದಿದ್ದು, ಅದನ್ನು ಉಳಿಸಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಢಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ,

Advertisement

Udayavani is now on Telegram. Click here to join our channel and stay updated with the latest news.

Next