Advertisement

ಮೀನುಗಾರಿಕೆಗೆ ತೆರಳುತ್ತಿದ್ದ ವ್ಯಕ್ತಿ  ದಿಢೀರ್‌ ನಾಪತ್ತೆ

10:52 AM Sep 16, 2018 | Team Udayavani |

ಕೋಟೇಶ್ವರ: ಕೊರವಡಿ ಗ್ರಾಮದ ನಿವಾಸಿ ಮೀನುಗಾರ ಯುವಕ ಚಂದ್ರಕಾಂತ್‌ ಮರಕಾಲ (32) ಅವರು ಕೋಟೇಶ್ವರದ ರಾ. ಹೆದ್ದಾರಿ 66ರ ಹಿಂದೂ ರುದ್ರ ಭೂಮಿಯ ಬಳಿ ಶನಿವಾರ ಮುಂಜಾನೆ  3 ಗಂಟೆ ಹೊತ್ತಿಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

Advertisement

ಕುಂಭಾಶಿ ನಿವಾಸಿ ನಾರಾಯಣ ಮರಕಾಲ ಅವರ  ಪುತ್ರ ಚಂದ್ರ ಕಾಂತ್‌ ಅವರು  ವೃತ್ತಿಯಲ್ಲಿ ಮೀನುಗಾರರಾಗಿದ್ದು, ಅರೆಕಾಲಿಕವಾಗಿ ಹೋಂ ಗಾರ್ಡ್‌ ಆಗಿದ್ದರು. ಶನಿವಾರ ಬೆಳಗ್ಗಿನ ಜಾವ ಮನೆಯಿಂದ ಮೀನು ಗಾರಿಕೆಗಾಗಿ  ಬೈಕ್‌ನಲ್ಲಿ ತೆರಳಿದ್ದ ಅವರು ಕೋಟೇಶ್ವರದಲ್ಲಿ ನಾಪತ್ತೆ ಯಾಗಿರುತ್ತಾರೆ. ಅವರ  ಬೈಕ್‌, ಹೆಲ್ಮೆಟ್‌, ಚಪ್ಪಲಿ, ಮೊಬೈಲ್‌ ಮುಂತಾ ದ ವು ಸನಿಹದಲ್ಲೇ ಪತ್ತೆಯಾಗಿತ್ತು. 

ಇವರು ಏಕಾಏಕಿ  ನಾಪತ್ತೆಯಾಗಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿದೆ.  ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ  ಸ್ಥಳೀಯರು ಹಾಗೂ ಆತನ ಸ್ನೇಹಿತರು ಕುಂದಾಪುರ  ಪೊಲೀಸರ ಸಹಕಾರದಲ್ಲಿ ಹುಡುಕಾಡಿದರೂ ಪ್ರಯೋಜನವಾಗಿಲ್ಲ.

ಒಂದು ಮಗುವಿನ ತಂದೆಯಾಗಿರುವ ಆತ ಪರಿಸರದಲ್ಲಿ ಎಲ್ಲರೊಡನೆ  ಉತ್ತಮ ಸಂಬಂಧ ಹೊಂದಿದ್ದರು.  ಅವರ ಸಹೋದರ ಕುಂದಾಪುರ ಠಾಣೆಗೆ ದೂರು ನೀಡಿದ್ದು, ಎಸ್‌.ಐ. ಹರೀಶ್‌  ಅವರು ಸ್ಥಳಕ್ಕೆ  ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. 

ಚಂದ್ರಕಾಂತ್‌ನ  ಪೂರ್ವಾಪರಗಳ ಬಗೆಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಹಲವು ವಿಷಯಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next