Advertisement

ಸೈಜುಗಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ

01:34 PM Jan 11, 2022 | Team Udayavani |

ವಾಡಿ: ವ್ಯಕ್ತಿಯೋರ್ವನ ತಲೆಗೆ ಸೈಜುಗಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮ ಸಮೀಪದ ಯರಗಲ್ ರಸ್ತೆಯ ಅಬ್ಬಾಸ ಅಲಿ ದರ್ಗಾ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.

Advertisement

ಕಲಬುರಗಿ ನಗರದ ಗಾಜಿಪುರ ನಗರದ ನಿವಾಸಿ, ಬಂಗಾರ ಅಂಗಡಿಯ ಮಾಲೀಕ ಮಂಜುನಾಥ್ ತೇಗನೂರ್ (38 ವ) ಕೊಲೆಯಾದ ವ್ಯಕ್ತಿ.

ಮೃತ ವ್ಯಕ್ತಿಯ ದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಚಿತ್ತಾಪುರ ತಾಲೂಕಿನ ಯರಗೋಳ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ಶವ ಪತ್ತೆಯಾಗಿದೆ. ತೇಗನೂರ್ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next