Advertisement

ಬ್ರೇಕ್ ಫೇಲ್; ಬೇಕರಿಗೆ ನುಗ್ಗಿದ ಖಾಸಗಿ ಬಸ್, ಇಬ್ಬರು ಬಲಿ

03:13 PM Jul 31, 2017 | Sharanya Alva |

ತುಮಕೂರು: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಬ್ರೇಕ್ ವಿಫಲವಾಗಿ ಬೇಕರಿಯೊಂದಕ್ಕೆ ನುಗ್ಗಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ಕೊರಟಗೆರೆಯ ಕೋಳಾಲ ಎಂಬಲ್ಲಿ ನಡೆದಿದೆ.

Advertisement

ಕೋಳಾಲ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಬ್ರೇಕ್ ವಿಫಲವಾಗಿ ನಿಯಂತ್ರಣ ತಪ್ಪಿ ಬನಶಂಕರಿ ಬೇಕರಿಯೊಳಕ್ಕೆ ನುಗ್ಗಿತ್ತು.  ಘಟನೆಯಲ್ಲಿ ಖಾಸಗಿ ಬಸ್ ನೊಳಗಿದ್ದ ಲಕ್ಷ್ಮಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬೇಕರಿ ಮಾಲೀಕ ಕುಮಾರ್(35ವರ್ಷ) ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next