Advertisement

ಮುಂಡ್ಕೂರು: ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಸರಕಾರದಿಂದ ನೂತನ ವ್ಯವಸ್ಥಾಪನ ಸಮಿತಿ ನೇಮಕ

02:51 PM Mar 15, 2024 | Team Udayavani |

ಮುಂಡ್ಕೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ 9 ಮಂದಿ ಸದಸ್ಯರ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಆದೇಶ ಹೊರಡಿಸಿದೆ.

Advertisement

ಸುರೇಂದ್ರ ಎಸ್ ಶೆಟ್ಟಿ ಕೋರಿಬೆಟ್ಟು, ಸುಜಾತ ಸುಬೋಧ್ ಶೆಟ್ಟಿ ಸಚ್ಚರ ಪರಾರಿ, ಅಕ್ಷತಾ ವಿಶ್ವಿತ್ ಶೆಟ್ಟಿ ಸಂಕಲಕರಿಯ, ಜಗದೀಶ ಎಸ್ ಶೆಟ್ಟಿ ಸಚೇರಿಪೇಟೆ, ಶೇಖರ ಎಸ್ ಶೆಟ್ಟಿ ಮಾಣಿಬೆಟ್ಟು, ಕೃಷ್ಣಪ್ಪ ಪೂಜಾರಿ ಮುಂಡ್ಕೂರು, ಸುರೇಶ್ ಸಾಲಿಯನ್ ಅಲಂಗಾರ್, ನಳಿನಾಕ್ಷಿ ರಾಜು ಸೇರಿಗಾರ ಕಡಪುಕರಿಯ ಇವರುಗಳನ್ನು ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದ್ದು ಸದಸ್ಯರ ಪ್ರಥಮ ಸಭೆಯಲ್ಲಿ ಓರ್ವ ಸದಸ್ಯನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನಡಾವಳಿಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next