Advertisement

ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ

11:15 AM Oct 27, 2021 | Team Udayavani |

ಕೊಪ್ಪಳ: ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಉಪ ಚುನಾವಣೆ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಕೇಂದ್ರ ಸಚಿವ ಎ‌.ನಾರಾಯಣಸ್ವಾಮಿ ಹೇಳಿದರು.

Advertisement

ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ಸುದ್ದಿಗಾರರ ಜೊತೆ ಮಾತನಾಡಿದರು. ಮೋದಿ ಎಂಬ ಸಂತನ ಆಡಳಿತ ದೇಶ ಭಕ್ತಿಯ ಆಡಳಿತದಿಂದ ಜನ ಬಿಜೆಪಿ ಗೆಲ್ಲಿಸುತ್ತಾರೆ. ಮೋದಿ, ಯಡಿಯೂರಪ್ಪ ಹಾಗೂ ಈಗಿನ ಬೋಮ್ಮಾಯಿ ಆಡಳಿತದಿಂದ ಬಿಜೆಪಿ ಗೆಲ್ಲಲಿದೆ.

ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೋಮ್ಮಾಯಿ ಆಡಳಿತ ಇದೆ. ಈ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ ಯಡಿಯೂರಪ್ಪ. ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಆಡಳಿತ ಮಾಡ್ತಿದ್ದಾರೆ. ಬಿಎಸ್ ವೈ ‌ಮಾರ್ಗದರ್ಶನದಲ್ಲಿ ಆಡಳಿತ ಮಾಡಿದವರಿಗೆ ಸೋಲಿಲ್ಲ ಎಂದರು.

ಸದಾಶಿವ ಆಯೋಗದ ವರದಿ ಜಾರಿ ವಿಚಾರ, ವರದಿ ಜಾರಿ ಆಗುತ್ತದೆ ಎಂಬ ಮಾತಿಗೆ ಈಗಲೂ ಬದ್ಧ. ಕಾಶ್ಮೀರಕ್ಕೆ 370 ತೆಗೆಯಲು ಆಗುವುದಿಲ್ಲ ಎಂದು ಎಲ್ಲರೂ ಹೇಳಿದ್ದರು. ಮೋದಿ, ಅಮಿತ್ ಷಾ ಪ್ರಯತ್ನದಿಂದ ಆರ್ಟಿಕಲ್ 370 ತೆಗೆಯಲಾಗಿದೆ. ಅದೇ ರೀತಿ ಸದಾಶಿವ ವರದಿ ಜಾರಿಗೆ ಕಾಲ ಕೂಡಿ ಬರಲಿದೆ. ಆರ್ಟಿಕಲ್ 341 ನಡಿ ಯಾವುದೇ ಜಾತಿ ತೆಗೆಯುವುದಿಲ್ಲ. ಎಲ್ಲರನ್ನೂ ಒಂದುಗೂಡಿಸಿ ಸದಾಶಿವ ಆಯೋಗದ ವರದಿ ಜಾರಿಯಾಗುತ್ತೆ. ನೂರಕ್ಕೆ ನೂರರಷ್ಟು ಸದಾಶಿವ ಆಯೋಗದ ವರದಿ ನಮ್ಮ ಸರ್ಕಾರದಲ್ಲೇ‌ ಜಾರಿ ಆಗುತ್ತೆ ಎಂದರು.

ಉಪಚುನಾವಣೆಯಲ್ಲಿ ಯಾರು ವೈಯಕ್ತಿಕ ಮಾತನಾಡಬಾರದು. ಪಕ್ಷ ಹಾಗು ಯೋಜನೆಗಳ ಕುರಿತು ಮಾತನಾಡಬೇಕಿತ್ತು. ಇದು ರಾಜಕಾರಣಕ್ಕೆ ಕಪ್ಪು ಚುಕ್ಕೆ. ಕಾಂಗ್ರೆಸ್ , ಜೆಡಿಎಸ್ ಆರ್ ಎಸ್ ಎಸ್ ಟೀಕೆ ಮಾಡುತ್ತಿದ್ದಾರೆ. ನಾನೂ ಸಂಘ ಪರಿವಾರದಿಂದ ಬಂದವನು.

Advertisement

ಧರ್ಮವನ್ನು ಹೊಡೆಯುವುದು ಧರ್ಮವನ್ನು ಇಬ್ಬಾಗ ಮಾಡುವ ಕೆಲಸ ಕಾಂಗ್ರೆಸ್ , ಜೆಡಿಎಸ್ ಪಕ್ಷ ಮಾಡಿವೆ. ಸಿದ್ದರಾಮಯ್ಯ ಬಿಜೆಪಿಯಿಂದ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎನ್ನುವ ಹೇಳಿಕೆ ವಿಚಾರ, ಈ ಬಗ್ಗೆ ನಾನು ಸಿಂದಗಿಯಲ್ಲಿ ಮಾತನಾಡುತ್ತೇನೆ. ಈ ದೇವಸ್ಥಾನದ ಜಾಗದಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next