Advertisement

ಕುಂಬಳೆಯಲ್ಲಿ ಯುವಕನ ಸಾವಿನಲ್ಲಿ ನಿಗೂಢತೆ

10:00 PM Jun 10, 2024 | Team Udayavani |

ಕುಂಬಳೆ: ನಾಯ್ಕಪು ನಿವಾಸಿಯೂ, ಕ್ರಿಕೆಟ್‌ ಆಟಗಾರ ಮಂಜುನಾಥ ನಾಯಕ್‌(24) ರ ಸಾವಿನಲ್ಲಿ ನಿಗೂಢತೆಗಳಿವೆಯೆಂದು ಸಂಬಂಧಿಕರು ಹಾಗು ಸ್ಥಳೀಯರು ಆರೋಪಿಸಿದ್ದಾರೆ. ಆದ್ದರಿಂದ ನಿಗೂಢತೆಗಳನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿ ನಾಯ್ಕಪಿನಲ್ಲಿ ಕ್ರಿಯಾ ಸಮಿತಿ ರಚಿಸಲಿದ್ದು, ಸಾವಿಗೆ ಮುನ್ನ ಫೋನ್‌ ಕರೆ ಮಾಡಿದ್ದು ಯಾರು? ಕಾಸರಗೋಡಿನಲ್ಲಿ ಹಲ್ಲೆ ಮಾಡಿದ್ದು ಯಾರು ಎಂಬ ಬಗ್ಗೆ ಪತ್ತೆಹಚ್ಚಬೇಕೆಂದು ಒತ್ತಾಯ ಕೇಳಿ ಬಂದಿದೆ.

Advertisement

ಜೂ.8 ರಂದು ಮುಂಜಾನೆ 5.30 ಕ್ಕೆ ಮಂಜುನಾಥ ಮನೆ ಸಮೀಪದ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜೂ.7 ರಂದು ಕಾಸರಗೋಡಿನಲ್ಲಿ ತಂಡವೊಂದು ಹಲ್ಲೆ ಮಾಡಲಾಗಿತ್ತು ಎನ್ನಲಾಗಿದೆ. ತಂಡದಿಂದ ರಕ್ಷಿಸಿಕೊಳ್ಳಲು ಓಡಿ ಪರಾರಿಯಾಗಿದ್ದರೆನ್ನಲಾಗಿದೆ.

ಮಂಜುನಾಥ ಅವರಿಗೆ ಹಲ್ಲೆ ಮಾಡಲು ಕಾರಣವೇನು ಎಂಬುದನ್ನು ಪತ್ತೆಹಚ್ಚಬೇಕು. ಜೂ.7ರಂದು ರಾತ್ರಿ 11.30 ಕ್ಕೆ ಫೋನ್‌ ಕರೆ ಬಂದಿತ್ತು. ಆ ಕರೆ ಯಾರದ್ದು ಎಂಬುದನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಲಾಗಿದೆ. ಫೋನ್‌ನಲ್ಲಿ ಬೆದರಿಕೆಯೊಡ್ಡಿದ್ದಾರೆಯೇ ಎಂಬುದನ್ನೂ ತನಿಖೆ ನಡೆಸಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದಾರೆ.

10 ಲಕ್ಷ ರೂ. ಮೌಲ್ಯದ ಪಾದರಕ್ಷೆ ಕಳವು: ನಾಲ್ವರು ವಶಕ್ಕೆ
ಕಾಸರಗೋಡು: ಸೀತಾಂಗೋàಳಿಯ ಕಿನಾ#Å ಪಾರ್ಕ್‌ನ ಪಾದರಕ್ಷೆ ತಯಾರಿ ಸಂಸ್ಥೆಯಿಂದ 10 ಲಕ್ಷ ರೂ. ಮೌಲ್ಯದ ಪಾದರಕ್ಷೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಜಿಬೈಲು ನಿವಾಸಿ ಸಹಿತ ನಾಲ್ವರನ್ನು ಬದಿಯಡ್ಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಟ್ಟತ್ತಡ್ಕ ನಿವಾಸಿ ನಸೀರ್‌ ಹಾಗು ಕೊಲ್ಲಿಯಲ್ಲಿರುವ ವ್ಯಕ್ತಿಯೋರ್ವರು ಸೀತಾಂಗೋಳಿಯಲ್ಲಿ ವೆಲ್‌ಫಿಟ್‌ ಎಂಬ ಪಾದರಕ್ಷೆ ತಯಾರಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮೇ 22 ರಂದು ಪಾದರಕ್ಷೆ ಕಳವಾಗಿತ್ತು. ಕಳವು ಮಾಡಿದ ಪಾದರಕ್ಷೆಯನ್ನು ಕಾಸರಗೋಡು ನಗರದ ರಸ್ತೆ ಬದಿ ಮಾರಾಟ ಮಾಡುತ್ತಿದ್ದಾಗ ಆರೋಪಿಗಳನ್ನು ವಶಪಡಿಸಿದ್ದು, ವಿಚಾರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next