Advertisement

ಆಧಾರ್‌ಗೆ ಬಹೂದ್ದೇಶಿತ ಮುಖ: ರಾಜೀವ್‌ ಚಂದ್ರಶೇಖರ್‌

01:44 AM Apr 16, 2019 | Sriram |

ಉಡುಪಿ: ಆಧಾರ್‌ ಕಾರ್ಡ್‌ನ್ನು ಮೇಲ್ದರ್ಜೆಗೇರಿಸಿ ಬಹು ಉದ್ದೇಶಿತ ಕಾರ್ಡ್‌ ಆಗಿ ಮಾಡುವ ಉದ್ದೇಶವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೇಳಿದರು.

Advertisement

ಮಣಿಪಾಲದ ಹೊಟೇಲ್‌ ಕಂಟ್ರಿ ಇನ್‌ ಸಭಾಂಗಣದಲ್ಲಿ ರವಿವಾರ ದೇಶಭಕ್ತರ ವೇದಿಕೆ ಆಶ್ರಯದಲ್ಲಿ “ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾಗರಿಕರ ಪಾತ್ರ’ ಪರಿಕಲ್ಪನೆಯಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಭದ್ರತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಬಳಿಕ ಸಂವಾದದಲ್ಲಿ ಅವರು ಮಾತನಾಡಿದರು.

ದಿವ್ಯಾ ಹೆಗ್ಡೆ ಪ್ರಶ್ನೆಗೆ ಉತ್ತರಿಸಿ, ವಾಜಪೇಯಿ ಸಾಮಾನ್ಯ ಗುರುತು ಚೀಟಿ ಕಲ್ಪನೆ ಆರಂಭಿಸಿದ್ದರು. ಮುಂದೆ ರಾಷ್ಟ್ರೀಯ ನೋಂದಣಿ ನಾಗರಿಕ ಕಾರ್ಡ್‌ ಆಗಿ ಪರಿವರ್ತಿಸುವ ಇರಾದೆ ಇದೆ. ಇದು ಆಧಾರ್‌ನ ಮುಂದಿನ ಹೆಜ್ಜೆ ಎಂದರು.

370ನೆಯ ವಿಧಿ ರದ್ದು
ಎನ್‌ಡಿಎ ಸರಕಾರ ಬಂದ ಬಳಿಕ ಜಮ್ಮು ಕಾಶ್ಮೀರದ 370ನೆಯ ವಿಧಿ ಯನ್ನು ರದ್ದುಗೊಳಿಸುವುದಾಗಿ ರಾಜೀವ್‌ ಹೇಳಿದರು. ರಫೇಲ್‌ ಖರೀದಿ ರಾಷ್ಟ್ರದ ರಕ್ಷಣೆಗಾಗಿ. ಭೂಸೇನೆ, ವಾಯು- ನೌಕಾಪಡೆ ಗಳನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆ ಗೇರಿಸಲು ಮೋದಿ ಬದ್ಧವಾಗಿದ್ದಾರೆ. ಎಂದು ರಾಜೀವ್‌ ಹೇಳಿದರು.

ವಿಲಾಸ ನಾಯಕ್‌ ಸ್ವಾಗತಿಸಿ, ಪ್ರಾಧ್ಯಾಪಕ ಶ್ರೀನಾಥ್‌ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಸಂಘಟನೆ ನಾಯಕಿ ರಶ್ಮಿ ಸಾಮಂತ್‌ ವಂದಿಸಿದರು. ಕಾರ್ಯಕ್ರಮದ ಪ್ರಧಾನ ಸಂಚಾಲಕ ಮಹೇಶ್‌ ಠಾಕೂರ್‌ ಉಪಸ್ಥಿತರಿದ್ದರು. ಪ್ರೊ| ಬಾಲಕೃಷ್ಣ ಮಧ್ದೋಡಿ, ಗೋಕುಲ್‌ ಅತಿಥಿಗಳನ್ನು ಪರಿಚಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

Advertisement

“ರಾಷ್ಟ್ರಪ್ರಧಾನ ಚುನಾವಣೆ’
ನಿವೃತ್ತ ಸೇನಾಧಿಕಾರಿ, ಚಿಂತಕ ಸುರೇಂದ್ರ ಪೂನಿಯಾ ಮಾತನಾಡಿ, ದೇಶದ ಭದ್ರತೆ ಮುಖ್ಯವಾಗಬೇಕು. ಮೋದಿ ಮತ್ತು ಬಿಜೆಪಿ ಇದನ್ನೇ ಹೇಳುತ್ತಿದ್ದಾರೆ. ಇದು ಮಹತ್ವದ ಚುನಾವಣೆ. ಇಲ್ಲಿ ರಾಷ್ಟ್ರಪ್ರಧಾನ ಮತ್ತು ಪರಿವಾರ ಪ್ರಧಾನದ ನಡುವೆ ಚುನಾವಣೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next