Advertisement

ಬಹಿರ್ದೆಸೆಗೆ ಕುಳಿತಾಗ ಲಾರಿ ಹಾಯ್ದು ವ್ಯಕ್ತಿ ಸಾವು

08:35 PM Nov 06, 2022 | Team Udayavani |

ಹುಣಸಗಿ: ಬಹಿರ್ದೆಸೆಗೆ ಕುಳಿತಾಗ ಲಾರಿ ಹಾಯ್ದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಮಾಳನೂರ ಹತ್ತಿರದಲ್ಲಿ (ಹುಣಸಗಿ-ತಾಳಿಕೋಟಿ ರಸ್ತೆ) ಶನಿವಾರ ಬೆಳಗ್ಗೆ ನಡೆದಿದೆ.

Advertisement

ಮೃತ ದುರ್ದೈವಿ ಗೌಸಸಾಬ್ ಮದನಸಾಬ್ ಮುಲ್ಲಾ(41), ಮಾಳನೂರು ಗ್ರಾಮದವರಾಗಿದ್ದು, ರಸ್ತೆ ಪಕ್ಕದಲ್ಲಿ ಬಹಿರ್ದೆಸೆಗೆ ಕುಳಿತಿದ್ದ ವೇಳೆ ಅಪಘಾತ ಸಂಭವಿಸಿದೆ.

ಹುಣಸಗಿಯಿಂದ ವೇಗವಾಗಿ ಚಲಿಸುತ್ತಿದ್ದ ಲಾರಿ ಮೇಲೆ ಹಾಯ್ದು ಹೋಗಿದೆ. ಚಾಲಕನ ನಿಷ್ಕಾಳಜಿಯೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next