Advertisement

ಚಾಲಕ ಅಸ್ವಸ್ಥಗೊಂಡು ಕಾರುಗಳಿಗೆ ಢಿಕ್ಕಿ ಹೊಡೆದ ಲಾರಿ

09:36 PM Mar 09, 2023 | Team Udayavani |

ಬಂಟ್ವಾಳ: ಲಾರಿ ಚಾಲನೆಯ ಸಂದರ್ಭದಲ್ಲೇ  ಚಾಲಕ ಅಸ್ವಸ್ಥಗೊಂಡು ಲಾರಿ ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರುಗಳಿಗೆ ಢಿಕ್ಕಿ ಹೊಡೆದ ಘಟನೆ ಬುಧವಾರ ಬಿ.ಸಿ. ರೋಡಿನಲ್ಲಿ ನಡೆದಿದೆ.

Advertisement

ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಲಾರಿಯು ಬಿ.ಸಿ. ರೋಡು ತಲುಪುತ್ತಿದ್ದಂತೆ ಚಾಲಕ ಲಕ್ಷ್ಮಣ್‌ಗೆ ಮೂರ್ಚೆ ರೋಗ ಕಾಣಿಸಿಕೊಂಡಿದೆ. ಈ ವೇಳೆ ಲಾರಿ ಪೆಟ್ರೋಲ್‌ ಬಂಕ್‌ ಒಂದಕ್ಕೆ ನುಗ್ಗಿ ಪೆಟ್ರೋಲ್‌ ಹಾಕುತ್ತಿದ್ದ ಕಾರಿನ ಜತೆಗೆ ಅಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಹಾಗೂ ನ್ಯಾನೋ ಕಾರೊಂದಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜೀವಹಾನಿ ಉಂಟಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next