Advertisement

ಶಿಡ್ಲಘಟ್ಟ ಸಮೀಪ ಅಪಘಾತ : ವಕೀಲ ಸಾವು

09:44 AM Oct 08, 2019 | Team Udayavani |

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪಟ್ಟಣದ ಚಿಂತಾಮಣಿ ರಸ್ತೆಯ ವೈ.ಹುಣಸೇನಹಳ್ಳಿ ಸಮೀಪ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ವಕೀಲ ನೋಟರಿ ನೌಷಾದ್ ಅಲೀ ಅವರು  ಮೃತಪಟ್ಟಿದ್ದಾರೆ.

Advertisement

ಶಿಡ್ಲಘಟ್ಟ ನಗರದಿಂದ ಆಂಧ್ರಪ್ರದೇಶದ ಪುಂಗನೂರಿಗೆ ದ್ವಿಚಕ್ರ ವಾಹನದಲ್ಲಿ‌ ತೆರಳುತ್ತಿದ್ದಾಗ ಎದುರುಗಡೆಯಿಂದ‌ ಬಂದ ಟಾಟಾ ಏಸ್ ಡಿಕ್ಕಿ ಹೊಡೆದಿದ್ದರಿಂದ ನೌಷಾದ್ ಅಲೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತ ಸ್ಥಳಕ್ಕೆ ಪಿ.ಎಸ್.ಐ. ಹರೀಶ್, ತಾಲೂಕು ವಕೀಲರ‌ ಸಂಘದ ಪದಾಧಿಕಾರಿಗಳು,ನೌಷಾದ್ ಅಲೀ ಅವರ ಪತ್ನಿ ನಿವೃತ್ತ ಸಿಡಿಪಿಓ ತಾಜುನ್ನೀಸಾ ಹಾಗೂ ನ್ಯಾಯಾಧೀಶೆಯಾಗಿರುವ‌ ಚಾಂದಿನಿ ಮತ್ತಿತರರು ಭೇಟಿ ನೀಡಿದರು.

ಅಪಘಾತದ ನಂತರ ಟಾಟಾ ಏಸ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು‌ ನಾಪತ್ತೆಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next