Advertisement

Raid: ಅಕ್ರಮ ಗ್ಯಾಸ್ ಅಡ್ಡೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

08:51 AM Mar 22, 2024 | Team Udayavani |

ವಿಜಯಪುರ: ಅಕ್ರಮವಾಗಿ ಆಟೋಗಳಿಗೆ ಎಲ್.ಪಿ.ಜಿ. ಗ್ಯಾಸ್ ತುಂಬಿಸುವುದನ್ನು ತಡೆಯಲು ದಾಳಿ ನಡೆಸಿದ್ದ ಆಹಾರ ನಿರೀಕ್ಷಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ಹಲ್ಲೆಗೊಳಗಾದ ಆಹಾರ ನಿರೀಕ್ಷಕ ನಯೀಮ್ ಅತ್ತಾರ ದುಷ್ಕರ್ಮಿಗಳ ದಾಳಿಯಲ್ಲಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯಪುರ ನಗರದ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಅಕ್ರಮವಾಗಿ ಆಟೋಗಳಿಗೆ ಎಲ್.ಪಿ.ಜಿ. ಗ್ಯಾಸ್ ತುಂಬುಸುವಾಗ ಖಚಿತ ಮಾಹಿತಿ ಮೇರೆಗೆ ನಯೀಮ್ ದಾಳಿ ನಡೆಸಿದ್ದರು.

ಆರೋಪಿ ಶಬ್ಬೀರ್ ಜಮಖಂಡಿ ನಡೆಸುತ್ತಿದ್ದ ಅಕ್ರಮ ಗ್ಯಾಸ್ ತುಂಬಿಸುವ ಅಡ್ಡೆಯಲ್ಲಿ ಸಿಲಿಂಡರ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ಇದರಿಂದಾಗಿ ಕುಪಿತಗೊಂಡಿದ್ದ ಶಬ್ಬೀರ ಜಮಖಂಡಿ ತನ್ನ ಸ್ನೇಹಿತರಾದ ಸೋನು ನದಾಫ್ ಹಾಗೂ ಇತರರೊಂದಿಗೆ ರಹೀಂ‌ ನಗರದಲ್ಲಿರುವ ಆಹಾರ ಇಲಾಖೆ ನಿರೀಕ್ಷಕ ನಯೀಮ್ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾರೆ.

Advertisement

ಹಲ್ಲೆಯಿಂದ ಗಾಯಗೊಂಡಿರುವ ನಯೀಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ನಯೀಮ್ ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Rahul Gandhi: ದೆಹಲಿ ಸಿಎಂ ಬಂಧನ… ಇಂದು ಕೇಜ್ರಿವಾಲ್ ಕುಟುಂಬ ಭೇಟಿ ಮಾಡಲಿರುವ ರಾಹುಲ್

Advertisement

Udayavani is now on Telegram. Click here to join our channel and stay updated with the latest news.

Next