Advertisement

Ayodhya ಶ್ರೀರಾಮ ಮಂದಿರ ಟ್ರಸ್ಟ್ ಗೆ 50 ಚೀಲ ಜೋಳ ಕೊಟ್ಟ ರೈತ

08:55 PM Jan 22, 2024 | Team Udayavani |

ಸಿಂಧನೂರು: ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಸಂಭ್ರಮ ಮನೆ ಮಾಡಿದ್ದರೆ, ಇಲ್ಲೊಬ್ಬ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆದ ಜೋಳ( ಫಸಲು) ವನ್ನು ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ ಗೆ ಸಲ್ಲಿಸುವ ಮೂಲಕ ಭಕ್ತಿಯ ಸೇವೆ ತೋರಿದ್ದಾರೆ.

Advertisement

ತಾಲೂಕಿನ ಗೋಮರ್ಸಿ ಗ್ರಾಮದ ರೈತ ಕರಿಯಪ್ಪ ಅಂಬಿಗೇರ ಸೋಮವಾರ ಜೋಳದ ಚೀಲಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿ ಅವುಗಳನ್ನು ಟ್ರಸ್ಟ್ ಗೆ ಸಂಪರ್ಕ ಹೊಂದಿರುವವರಿಗೆ ಹಸ್ತಾಂತರಿಸಿದರು. 50 ಚೀಲ ಜೋಳ ತುಂಬಿದ ಟ್ರ್ಯಾಕ್ಟರ್ ಗೆ ಪೂಜೆ ಸಲ್ಲಿಸಿ ಜೋಳವನ್ನು ರವಾನಿಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪ್ರಹ್ಲಾದ್ ಕೆಂಗಲ್, ನೆಕ್ಕಂಟಿ ಸುರೇಶ್, ಶ್ರೀನಿವಾಸ್ ಗೋಮರ್ಸಿ, ರಮೇಶ ಮಡಿವಾಳರ್, ಉಮೇಶ ಉಪ್ಪಾರ, ಶಿವರೆಡ್ಡೆಪ್ಪ ಕಬ್ಬೇರ್, ಮುದುಕಪ್ಪ ಮಡಿವಾಳರ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next