Advertisement

ಶಾಲೆಯಲ್ಲಿ ಮಾತನಾಡುವ ಗೊಂಬೆ ಕಾರ್ಯಕ್ರಮ

01:49 PM Nov 18, 2021 | Team Udayavani |

 ನಂಜನಗೂಡು: ತಾಲೂಕಿನ ಹಳ್ಳದಕೇರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಾತನಾಡುವ ಗೊಂಬೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಕಲಾವಿದೆ ಸುಮನ್‌ ಅವರ ಮಾತನಾಡುವ ಗೊಂಬೆಯ ಹಾವಭಾವ ಹಾಗೂ ಮಾತನಾಡುವ ವೈಖರಿಯನ್ನು ಕಂಡು ವಿದ್ಯಾರ್ಥಿಗಳು ಉಲ್ಲಾಸ ಭರಿತರಾದರು.

ಇದನ್ನೂ ಓದಿ:- ಹಾಳಾದ ರಸ್ತೆಗೆ ಜಲಜೀವನ್‌ ಪರಿಹಾರ!

ಕ್ಷೇತ್ರ ಶಿಕ್ಷಣಧಿಕಾರಿ ರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಈ ಪುಟ್ಟ ಶಾಲೆಯ ಮಕ್ಕಳಿಗೆ ಇಲ್ಲಿನ ಮುಖ್ಯೋಫಾಧ್ಯಾಯರಾದ ಸತೀಶ ದಳವಾಯಿ ಒಂದಿಲ್ಲೊಂದು ರಚನಾತ್ಮ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮ ರತ್ನಾಕರ್‌ ಮಕ್ಕಳಿಗೆ ಶುಭ ಹಾರೈಸಿ ಮಂತ್ರಿ ಮಂಡಲವರಿಗೆ ಗುರುತಿನ ಚೀಟಿ ವಿತರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next