Advertisement

ಬೈಂದೂರು: ಶಿರೂರು ಚೆಕ್‌ಪೋಸ್ಟ್‌ ಬಳಿ ಅಪಾಯದ ಗುಂಡಿ

01:00 AM Feb 12, 2019 | Team Udayavani |

ಬೈಂದೂರು: ಶಿರೂರು ತೂದಳ್ಳಿ ಕ್ರಾಸ್‌ ಬಳಿಯ ಚೆಕ್‌ಪೋಸ್ಟ್‌  ಸಮೀಪ‌ ಚರಂಡಿಯ ಸ್ಲಾಬ್‌ ಜಾರಿದ್ದು ಗುಂಡಿ ನಿರ್ಮಾಣವಾಗಿದೆ.

Advertisement

ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಎರಡು ಕಡೆಗಳಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದೆ. ಚರಂಡಿ ಮೇಲ್ಭಾಗವನ್ನು ಕಾಂಕ್ರೀಟ್‌ ಸ್ಲಾಬ್‌ನಿಂದ ಮುಚ್ಚಲಾಗಿದ್ದರೂ ಕೆಲವು ಕಡೆಗಳಲ್ಲಿ ಸ್ಲಾಬ್‌ ಇಲ್ಲದ ಪರಿಣಾಮ ಪಾದಚಾರಿಗಳು ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿಷಯವನ್ನು ಹಲವು ಬಾರಿ ಸ್ಥಳೀಯರು ಪಂಚಾಯತ್‌ ಹಾಗೂ ಅಧಿಕಾರಿಗಳ, ಕಂಪೆನಿ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ. ಅಪಾಯ ಸಂಭವಿಸುವ ಮೊದಲು ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಇಲಾಖೆ ಸ್ಪಂದಿಸುತ್ತಿಲ್ಲ
ಐಆರ್‌ಬಿ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಈಗಾಗಲೇ ಹಲವು ದೂರುಗಳು ಬಂದಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರಗಳನ್ನು ಬರೆಯಲಾಗಿದೆ. ಆದರೆ ಇಲಾಖೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. 
– ಮಂಜುನಾಥ ಶೆಟ್ಟಿ, ಶಿರೂರು ಪಿಡಿಒ 

Advertisement

Udayavani is now on Telegram. Click here to join our channel and stay updated with the latest news.

Next